ಶಿರಾಡಿ ಘಾಟ್ನಲ್ಲಿ ಮಗುಚಿದ ಮದುವೆ ಬಸ್! | Janata news
ಮಂಗಳೂರು : ಮಗುಚಿ ಬಿದ್ದು, ಬಸ್ನಲ್ಲಿದ್ದ 12 ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ. ಮದುವೆಯ ದಿಬ್ಬಣದ ಬಸ್ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ಬಿ.ಸಿ. ರೋಡ್- ಪೊಳಲಿ ರಸ್ತೆಯ ತಿರುವಿನಲ್ಲಿ ನಡೆದಿದೆ.
ಎರಡೂ ಬಸ್ ಗಳು ಬಿ.ಸಿ .ರೋಡ್ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದವು. ಕಲ್ಪನೆ ಎಂಬಲ್ಲಿರುವ ತಿರುವಿನಲ್ಲಿ ಮುಂದಿನಿಂದ ಹೋಗುತ್ತಿದ್ದ ರೂಟ್ ಬಸ್ಗೆ ಹಿಂದಿನಿಂದ ಬರುತ್ತಿದ್ದ ಮದುವೆ ದಿಬ್ಬಣದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮದುವೆ ದಿಬ್ಬಣದ ಬಸ್ ಚರಂಡಿಗೆ ಬಿದ್ದರೆ, ರೂಟ್ ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ.
ಈ ಪರಿಣಾಮ ಬಸ್ನಲ್ಲಿದ್ದ ವಿನೋದಾ ರೈ, ಶ್ರೀಧರ ಶೆಟ್ಟಿ, ಜಗನ್ನಾಥ್ ಶೆಟ್ಟಿ, ಪ್ರೇಮಲತಾ, ಡೀಲಾಕ್ಷ, ಚಾಲಕ ಮಹೇಶ್ ಗಂಭೀರ ಗಾಯಗೊಂಡು ಮಂಗಳೂರು ಹಾಗೂ ಪುತ್ತೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.