ನಾನು ಕೆಸರಿನ ಓಟಗಾರ, ಟ್ರ್ಯಾಕ್ನಲ್ಲಿ ಓಡುವುದಿಲ್ಲ: ಕಂಬಳ ವೀರ ಶ್ರೀನಿವಾಸ್ ಗೌಡ | Janata news
ಬೆಂಗಳೂರು : ಕಂಬಳದಲ್ಲಿ ದಾಖಲೆಯ ಓಟದ ಮೂಲಕವೇ ರಾಷ್ಟ್ರಮಟ್ಟದಲ್ಲಿ ಹೆಸರಾದ ಮೂಡುಬಿದರೆಯ ಶ್ರೀನಿವಾಸ್ ಗೌಡ, ಕಂಬಳದಲ್ಲಿ 145 ಮೀಟರ್ ದೂರವನ್ನು ಕೇವಲ 13.45 ಸೆಕೆಂಡ್ ನಲ್ಲಿ ಓಡಿ ಕರ್ನಾಟಕದ ಉಸೇನ್ ಬೋಲ್ಟ್ ಎನಿಸಿಕೊಂಡಿರುವ ಶ್ರೀನಿವಾಸ್ ಗೌಡ ಅವರು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡಲು ನಿರಾಕರಿಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರೇ ಟ್ವೀಟ್ ಮಾಡಿ, ಶ್ರೀನಿವಾಸ್ ಗೌಡ ಅವರಿಗೆ ಸೂಕ್ತ ತರಬೇತಿ ನೀಡಿ, ಅವರನ್ನು ಓಟದ ಪರೀಕ್ಷೆಗೆ ಒಳಪಡಿಸಿ ಎಂದು ಸೂಚನೆ ನೀಡಿದ್ದರು.
ಬೆಂಗಳೂರಿನಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಪ್ ಇಂಡಿಯಾದಲ್ಲಿ ರನ್ನಿಂಗ್ ಟೆಸ್ಟ್ ನಡೆಸಲು ಸಿದ್ಧತೆಯನ್ನು ಮಾಡಲಾಗಿತ್ತು. ಆದರೆ, ಶ್ರೀನಿವಾಸ್ ಗೌಡ ಅವರು ತಾವು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುವುದಿಲ್ಲ, ಬದಲಿಗೆ ಕಂಬಳದಲ್ಲಿಯೇ ಓಡುತ್ತೇನೆ ಎಂದು ಹೇಳಿದ್ದಾರೆ. ನಾನು ರನ್ನಿಂಗ್ ಟ್ರ್ಯಾಕ್ ಓಟಗಾರನಲ್ಲ, ಅದಕ್ಕೆ ಬೇಕಾಗಿರುವ ಕೌಶಲ್ಯ ಬೇರೆ ಕಂಬಳಕ್ಕೆ ಬೇಕಾಗಿರುವ ಕೌಶಲ್ಯ ಬೇರೆ ಎಂದು ಹೇಳಿದ್ದಾರೆ.
ನಾನು ಕಂಬಳದಲ್ಲೇ ಏನಾದ್ರು ಸಾಧನೆ ಮಾಡಬೇಕು. ನನಗೆ ಟ್ರ್ಯಾಕ್ನಲ್ಲಿ ಓಡೋಕಾಗಲ್ಲ. ಟ್ರ್ಯಾಕ್ನಲ್ಲಿ ಓಡುವವರು ಕಂಬಳದ ಗದ್ದೆಯಲ್ಲಿ ಓಡಲಿಕ್ಕಾಗಲ್ಲ. ಕಂಬಳದಲ್ಲಿ ಹಿಮ್ಮಡಿಯಿಂದ ಓಡಬೇಕಾಗುತ್ತದೆ. ಆದ್ರೆ ಟ್ರ್ಯಾಕ್ನಲ್ಲಿ ಮುಂಗಾಲನ್ನು ಬಳಸಿ ಓಡಬೇಕು. ಎರಡೂ ಬೇರೆ, ಬೇರೆ, ನಾನು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುವುದಿಲ್ಲ, ಬದಲಿಗೆ ಕಂಬಳದಲ್ಲಿಯೇ ಸಾಧನೆ ಮಾಡುತ್ತೇನೆ ಎಂದು ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಇನ್ನು ಕಂಬಳದಲ್ಲೇ ಇನ್ನು ಹೆಚ್ಚಿನ ಸಾಧನೆ ಮಾಡಬೇಕು ಅಂತ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿರುವ ಶ್ರೀನಿವಾಸ್ಗೌಡರಿಗೆ ರಾಜ್ಯ ಸರ್ಕಾರ ನೆರವು ನೀಡಲು ಮುಂದಾಗಿದೆ. ಈ ಸಂಬಂಧ ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್, ತಮ್ಮ ಇಲಾಖೆಯ ಅಧಿಕಾರಿಗಳನ್ನು ಶ್ರೀನಿವಾಸ್ ಗೌಡರ ಬಳಿಗೆ ಕಳುಹಿಸಿ ಆತನ ಕ್ಷಮತೆ ಹಾಗೂ ಆತನಿಗೆ ಅಗತ್ಯವಿರುವ ನೆರವಿನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇವತ್ತು ಶ್ರೀನಿವಾಸ್ ಗೌಡ ಯಡಿಯೂರಪ್ಪರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಮಾಡಿರುವ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ ಅವರಿಗೆ ಇಲಾಖೆಯಿಂದ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಇಂದು ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿಯಾಗಿ ಮಾಹಿತಿ ಪಡೆದರು.
— Shivaram Hebbar (@ShivaramHebbar) February 15, 2020
ಕಂಬಳ ವೀರ !!!@mani1972ias @DeputyLabour pic.twitter.com/WX7wcg5U1V