ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡ ನಿರ್ಭಯಾ ಪ್ರಕರಣದ ಅಪರಾಧಿ ವಿನಯ್! | Janata news
ನವದೆಹಲಿ: : ದೆಹಲಿಯ ನಿರ್ಭಯಾ ಗ್ಯಾಂಗ್ರೇಪ್ ಮತ್ತು ಮರ್ಡರ್, ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ಶರ್ಮಾ ಎಂಬಾತ ಗೋಡೆಗೆ ತಲೆ ಚಚ್ಚಿಕೊಂಡು, ಗಾಯಮಾಡಿಕೊಂಡಿದ್ದಾನೆ.
ಮಾರ್ಚ್ 3ರಂದು ಗಲ್ಲಿಗೆ ಏರಲಿರುವ ಅಪರಾಧಿ ವಿನಯ್ ಶರ್ಮಾ, ಫೆಬ್ರವರಿ 16ರಂದು ವಿನಯ್ ತಿಹಾರ್ ಜೈಲಿನಲ್ಲಿ ತಾನಿದ್ದ ಕೋಣೆಯ ಗೋಡೆಗೆ ತಲೆ ಬಡಿದುಕೊಂಡು ಗಾಯಗೊಂಡಿದ್ದಾನೆ, ಆತನ ತಲೆಗೆ ಸಣ್ಣ ಗಾಯವಾಗಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಿಹಾರ್ ಜೈಲಿನಲ್ಲಿ ಈ ಕೃತ್ಯವೆಸಗಿರುವ ಈತ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈ ಹೈಡ್ರಾಮಾ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಫೆಬ್ರವರಿ 17ರಂದು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಿರ್ಭಯಾ ಅಪರಾಧಿಗಳಾದ ವಿನಯ್ ಶರ್ಮಾ ಸೇರಿದಂತೆ ಅಕ್ಷಯ್ ಠಾಕೂರ್, ಮುಖೇಶ್ ಸಿಂಗ್, ಪವನ್ ಗುಪ್ತಾರನ್ನು ಮಾರ್ಚ್ 3, ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಅಂತಾ ಹೊಸ ಡೆತ್ ವಾರೆಂಟ್ ಜಾರಿ ಮಾಡಿತ್ತು.