1 ಕೋಟಿ 60 ಲಕ್ಷ ವಂಚನೆ; ಸ್ಯಾಂಡಲ್ವುಡ್ ನಟ ಅರೆಸ್ಟ್! | Janata news
ಬೆಂಗಳೂರು : ಒಂದು ಕೋಟಿ 60 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಕಾಫಿ ಕಟ್ಟೆ ಸಿನಿಮಾದ ನಾಯಕ ಆನಂದ್ ರೆಡ್ಡಿಯನ್ನ ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಆನಂದ್ ರೆಡ್ಡಿ, ಲಾಜಿ ಕ್ಯಾಶ್ ಎಂಬ ಸಂಸ್ಥೆಯಲ್ಲಿ ಎಟಿಎಂ ಗೆ ಹಣ ತುಂಬಿಸುವ ಕಾರ್ಯದ ಮೇಲುಸ್ತುವಾರಿ ಮಾಡುವ ಕೆಲಸಕ್ಕೆ ಸೇರಿದ್ದ. ಸಿನಿಮಾ ನಿರ್ಮಿಸುವ ಹುಚ್ಚಿಗೆ ಬಿದ್ದಿದ್ದ ಆನಂದ್ ರೆಡ್ಡಿ ಎಟಿಎಂ ಗಳಿಗೆ ಪೂರ್ತಿ ಹಣ ಹಾಕುವ ಬದಲಿಗೆ ಅರ್ಧ ಹಣ ಹಾಕಿ ಉಳಿದ ಹಣವನ್ನು ಜೇಬಿಗೆ ತುಂಬಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಬ್ಯಾಂಕ್ಗಳವರಿಗೆ ಮಾಹಿತಿ ಗೊತ್ತಾಗಿ, ಲಾಜಿ ಕ್ಯಾಶ್ ಗೆ ಮಾಹಿತಿ ನೀಡಿದ್ದರು. ಅವರು ಪುಲಕೇಶಿ ನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಪೊಲೀಸರು ಆನಂದ್ ರೆಡ್ಡಿ ಅನ್ನು ಬಂಧಿಸಿದ್ದಾರೆ.
ಕಾಫಿ ಕಟ್ಟೆ ಎನ್ನುವ ಸಿನಿಮಾದಲ್ಲಿ ಆನಂದ್ ರೆಡ್ಡಿ ನಾಯಕನಾಗಿ ನಟಿಸಿದ್ದ. ಈ ಸಿನಿಮಾದಲ್ಲಿ ಹಲವು ಹಿರಿಯ ಪೋಷಕ ಹಾಗೂ ಹಾಸ್ಯ ಕಲಾವಿದರು ನಟಿಸಿದ್ದರು.
ಪುಲಕೇಶಿ ನಗರದ ಪೋಲಿಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆನಂದ್ ರೆಡ್ಡಿ ಸಿನಿಮಾ ಮಾಡುವ ಗೀಳಿನಿಂದ ಹೀಗೆ ಮಾಡಿದ್ದರು ಎನ್ನಲಾಗಿದೆ. ಈತನಿಂದ ಮೂರು ಕಾರು, ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.