ಅಮೂಲ್ಯಾಳನ್ನು ಜೈಲಿನಿಂದ ಬಿಟ್ಟರೆ ಎನ್ಕೌಂಟರ್ ಮಾಡುತ್ತೇವೆ.ಮತ್ಯಾರಾದರೂ ಮಾಡಿದರೆ ಅವರಿಗೆ 10 ಲಕ್ಷ ರೂ. ನೀಡುತ್ತೇವೆ: ಶ್ರೀರಾಮಸೇನೆ ಮುಖಂಡ | Janata news
ಬಳ್ಳಾರಿ: : ದೇಶದ್ರೋಹಿ ಹೇಳಿಕೆ ನೀಡಿದವರನ್ನು ಜೈಲಿನಿಂದ ಬಿಡುಗಡೆ ಮಾಡಬೇಡಿ. ಅವರನ್ನು ಬಿಡುಗಡೆ ಮಾಡಿದರೆ ಎನ್ ಕೌಂಟರ್ ಮಾಡುತ್ತೇವೆ, ಇಂದು ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಅಮೂಲ್ಯ ವಿರುದ್ಧದ ಹೋರಾಟದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಮುಖಂಡ ಸಂಜೀವ್ ಮರಡಿ ಈ ಘೋಷಣೆ ಮಾಡಿದ್ದಾರೆ.
ದೇಶದ್ರೋಹಿ ಹೇಳಿಕೆ ನೀಡುವುದು, ಪಾಕಿಸ್ತಾನಕ್ಕೆ ಜೈಕಾರ ಕೂಗುವುದು ಕೆಟ್ಟ ವೈರಸ್ ಆಗಿದೆ. ಕ್ಯಾನ್ಸರ್ನಂತೆ ಹಬ್ಬುತ್ತಿದೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮೂರು ಮಂದಿ ಕೂಗಿದರು. ಈಗ ಅಮೂಲ್ಯಾ ಎಂಬುವಳು ಕೂಗಿದ್ದಾಳೆ.
ಈಗ ಜೈಲುಪಾಲಾಗಿರುವ ಅಮೂಲ್ಯಾಳನ್ನು ಯಾವ ಕಾರಣಕ್ಕೂ ಜಾಮೀನಿನ ಆಧಾರದಲ್ಲಿ ಹೊರಗೆ ಬಿಡಬೇಡಿ ಎಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಬಿಡುಗಡೆ ಮಾಡಿದರೆ ನಾವೇ ಎನ್ಕೌಂಟರ್ ಮಾಡುತ್ತೇವೆ.
ಎನ್ ಕೌಂಟರ್ ಮಾಡಿದವರಿಗೆ ಶ್ರೀರಾಮಸೇನೆಯಿಂದ 10 ಲಕ್ಷ ರೂಪಾಯಿ ಬಹುಮಾನ ಕೊಡುತ್ತೇವೆ ಎಂದು ಘೋಷಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.