ಮಾಜಿ ಸಚಿವ ಚನ್ನಿಗಪ್ಪ ಅಂತಿಮ ದರ್ಶನದ ವೇಳೆ ದೇವೇಗೌಡರು ಕಣ್ಣೀರು! | Janata news
ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ನಿನ್ನೆ ನಿಧನರಾದ ಮಾಜಿ ಸಚಿವ ಚನ್ನಿಗಪ್ಪ ಅವರ ಅಂತಿಮ ದರ್ಶನವನ್ನ ಪಡೆದರು. ಇಂದು ಮಾಜಿ ಸಚಿವ ಚನ್ನಿಗಪ್ಪ ಅವರ ಅಂತಿಮ ದರ್ಶನ ಪಡೆದ ದೇವೇಗೌಡರು, ಅವರೊಂದಿಗಿನ ಒಡನಾಟವನ್ನು ನೆನೆದು ಭಾವುಕರಾಗಿದ್ದಾರೆ.
ನಂತರ ಮಾತನಾಡಿದ ದೇವೇಗೌಡರು, ಚನ್ನಿಗಪ್ಪ ನನ್ನ ಮೇಲೆ ಅಪಾರ ಪ್ರೀತಿ ಇಟ್ಟಿದ್ದ. ನನ್ನ ಮೇಲಿನ ಪ್ರೀತಿಯಿಂದ ನನ್ನ ಹೆಸರಲ್ಲಿ ವಿದ್ಯಾಸಂಸ್ಥೆ, ಟ್ರಸ್ಟ್ ರಚನೆಗೆ ಮುಂದಾಗಿದ್ದ. ನಾನು ನನ್ನ ಹೆಸರಲ್ಲಿ ಬೇಡ ಎಂದು ಕಿವಿಮಾತು ಹೇಳಿದೆ. ಬಳಿಕ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಹೆಸರಲ್ಲಿ ವಿದ್ಯಾಸಂಸ್ಥೆ ಸ್ಥಾಪನೆ ಮಾಡಿದ್ದರು ಎಂದು ಹಳೆಯ ದಿನಗಳನ್ನು ನೆನೆದು ಭಾವುಕರಾದರು.
English summary :H. D. Deve Gowda