ಬೀದರ್: ಸಚಿವ ಪ್ರಭು ಚೌಹಾಣ್ಗೆ ಸೇರಿದ ಕಾರು ಪಲ್ಟಿ! | Janata news
ಬೀದರ್ : ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಶಾಸಕರ ಗನ್ ಮ್ಯಾನ್ ಹಾಗೂ ವಾಹನ ಚಾಲಕ ಗಾಯಗೊಂಡಿದ್ದಾರೆ.
ತೆಲಂಗಾಣದ ಜಹಿರಾಬಾದಿನ ಬಳಿ ಇಂದು ಪ್ರಭು ಚವ್ಹಾಣ್ ಅವರ ಕಾರು ಅಪಘಾತಕ್ಕೀಡಾಗಿದೆ.
ಬೀದರ್ನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಸರ್ಕಾರಿ ಗಾಡಿಯಲ್ಲಿ ಪ್ರಭು ಚವಾಣ್ ಸಂಚರಿಸುತ್ತಿದ್ದರು. ಅವರ ಸ್ವಂತ ಕಾರಾದ ಫಾರ್ಚುನರ್ನಲ್ಲಿ ಅವರ ಗನ್ ಮ್ಯಾನ್ ಮತ್ತು ಕೆಲ ಕಾರ್ಯಕರ್ತರು ಪ್ರಯಾಣಿಸುತ್ತಿದ್ದರು. ರಸ್ತೆಯಲ್ಲಿ ಅವರ ಸ್ವಂತ ಕಾರಿನ ನಿಯಂತ್ರಣ ತಪ್ಪಿದ್ದು ಪಲ್ಟಿಯಾಗಿ ಬಿದ್ದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗನ್ ಮ್ಯಾನ್ ರವಿ ಹಾಗೂ ಚಾಲಕ ಸಂಜುಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಬಂಧ ತೆಲಂಗಾಣದ ಜಹೀರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.