ವಿನಯ್ ಗುರೂಜಿಗೆ ಬ್ಲಾಕ್ ಮೇಲ್ ಪ್ರಕರಣ: ನಾಲ್ವರು ಸಿಸಿಬಿ ಬಲೆಗೆ | Janata news
ಬೆಂಗಳೂರು : ಪತ್ರಕರ್ತರ ಹೆಸರಿನಲ್ಲಿ ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಮುನಿರಾಜು, ಮನೋಜ್, ರವಿಕುಮಾರ್ ಮುರಳಿ, ಮಂಜು ಬಂಧಿತರು .ಬಂಧಿತರು ವಿನಯ್ ಗುರೂಜಿಯ ಭಾಷಣದ ವಿಡಿಯೋ ತುಣುಕಗಳನ್ನು ತಪ್ಪಾಗಿ ಕಾವೇರಿ ಯೂಟ್ಯೂಬ್ ಚಾನೆಲ್ ನಲ್ಲಿ ವೈರಲ್ ಮಾಡುತ್ತಿದ್ದರು.
ನಾಲ್ಕು ವರ್ಷಗಳಿಂದ ಸಮಾಜದ ಹಲವು ಪ್ರಭಾವಿ ವ್ಯಕ್ತಿಗಳಿಗೆ, ಇದೇ ರೀತಿ ಬ್ಲಾಕ್ಮೇಲ್ ಮಾಡಿರುವ ಅಂಶ ಬಹಿರಂಗವಾಗಿದೆ.
ನಂತರದ ದಿನಗಳಲ್ಲಿ ಇವರು ಕಣ್ಣು ಅವಧೂತ ವಿನಯ್ ಗುರೂಜಿ ಹಾಗೂ ಭಕ್ತರ ಮೇಲೂ ಬಿದ್ದು, ಅವರನ್ನು ಬೆದರಿಸಿದೆ. ಉದ್ಯಮಿ ಹಾಗೂ ವಿನಯ್ ಗುರೂಜಿ ಭಕ್ತ ಪ್ರಶಾಂತ್ ಎಂಬುವವರನ್ನು ಸಂಪರ್ಕಸಿದ್ದ ಮುನಿರಾಜು ಗ್ಯಾಂಗ್, ಮಧ್ಯವರ್ತಿ ಮುರಳಿ ಮೂಲಕ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿತ್ತು.
ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ ನಡೆಸಬಾರದೆಂದರೆ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡಿತ್ತು. ಬಳಿಕ ಪ್ರಶಾಂತ್ ಈ ಸಂಬಂಧ ಸಿಸಿಬಿ ಪೊಲೀಸರ ಮೊರೆ ಹೊಗಿದ್ದರು.