ಎಲ್ಲಾ ಐಟಿ/ಬಿಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು :ಡಿಸಿಎಂ ಅಶ್ವತನಾರಾಯಣ | Janata news
ಬೆಂಗಳೂರು : ಅಗತ್ಯ ಸೇವೆಗಳನ್ನು ಬಿಡುಗಡೆ ಮಾಡುವವರನ್ನು ಹೊರತುಪಡಿಸಿ ಐಟಿ ಮತ್ತು ಬಿಟಿ ಕಂಪನಿಗಳ ಎಲ್ಲಾ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಉಪಮುಖ್ಯಮಂತ್ರಿ(ಡಿಸಿಎಂ) ಸಿ ಎನ್ ಅಶ್ವತ್ ನಾರಾಯಣ್ ಶುಕ್ರವಾರ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ ನಾರಾಯಣ್ ಅವರು, ನಿನ್ನೆ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ, ಐಟಿ ಕಂಪನಿಗಳು ತಮ್ಮ ಕಚೇರಿಗಳನ್ನು ಬಂದ್ ಮಾಡುವ ಮತ್ತು ಅಗತ್ಯ ಸೇವೆಗಳನ್ನು ಬಿಡುಗಡೆ ಮಾಡುವವರನ್ನು ಹೊರತುಪಡಿಸಿ ಉಳಿದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲು ಒಪ್ಪಿಕೊಂಡಿವೆ, ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕಂಪನಿ ಉದ್ಯೋಗಿಗಳ ಅರೋಗ್ಯ ರಕ್ಷಣೆಗೆ ಹಾಗೂ ಸಂಕ್ರಾಮಿಕ ಹರಡದ ಹಾಗೆ ಹಲವು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಕಂಪನಿ ಮುಖ್ಯಸ್ಥರಿಗೆ ಈ ಸಂದರ್ಭದಲ್ಲಿ ಸಲಹೆ ನೀಡಲಾಗಿದೆ.
ಮನೆಯಿಂದ ಕೆಲಸ ಮಾಡಲು ಅನುಕೂಲವಾಗುವಂತೆ ಸರ್ಕಾರವು ನಿರಂತರ ಬ್ರಾಡ್ಬ್ಯಾಂಡ್ ಮತ್ತು ವಿದ್ಯುತ್ ಸರಬರಾಜು ನೀಡುವ ಕುರಿತು ಟೆಲಿಕಾಂ ಮತ್ತು ವಿದ್ಯುತ್ ಸಂಸ್ಥೆಗಳೊಂದಿಗೆ ಮಾತನಾಡಲಿದೆ, ಎಂದು ಅಶ್ವತ್ ನಾರಾಯಣ್ ಉದ್ಯಮಕ್ಕೆ ಭರವಸೆ ನೀಡಿದ್ದಾರೆ.
ಐಟಿ-ಬಿಟಿ ಮತ್ತು ಸ್ಟಾರ್ಟ್-ಅಪ್ ಕಂಪನಿಗಳ ಮುಖ್ಯಸ್ಥರೊಂದಿಗೆ ಶುಕ್ರವಾರ ವಿಡಿಯೋ ಸಮಾವೇಶವನ್ನು ನಡೆಸಲಾಗಿದ್ದು, ಅಲ್ಲಿ ಉಪಮುಖ್ಯಮಂತ್ರಿಗಳು, ಕರೋನವೈರಸ್ ಏಕಾಏಕಿ ನಿಯಂತ್ರಿಸಲು ಕೈಗೊಂಡ ಕ್ರಮಗಳನ್ನು ವಿವರಿಸಿದ್ದು ಮತ್ತು ಉದ್ಯಮದ ಪ್ರಮುಖರಿಂದ ಸಲಹೆಗಳನ್ನು ಸಹ ಕೋರಲಾಗಿದೆ.
ಮನೆಯಿಂದ ಕೆಲಸ(ವರ್ಕ್ ಫ್ರೊಂ ಹೋಂ) ಮಾಡುವ ಬಗ್ಗೆ, ಅನೇಕ ಕಂಪನಿಗಳು ಈ ಸಲಹೆಯನ್ನು ಒಪ್ಪಿಕೊಂಡಿಲ್ಲ, ಈಗಲೂ ಸಹ ಅನೇಕ ಉದ್ಯೋಗಿಗಳು ಆಯಾ ಕಚೇರಿಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ಕಡ್ಡಾಯವಾಗಿ ಮನೆಯಿಂದ ಕೆಲಸ ಮಾಡಲು ಆದೇಶ ಹೊರಡಿಸಲು ನಾವು ಬಯಸುವುದಿಲ್ಲ. ಅವರು ಅದನ್ನು ಸ್ವಯಂಪ್ರೇರಣೆಯಿಂದ ಮಾಡಬೇಕೆಂದು ನಾವು ಬಯಸುತ್ತೇವೆ, ಎಂದು ಐಟಿ-ಬಿಟಿ ಖಾತೆಯ ವಸ್ತುವಾರಿ ಹೊಂದಿರುವ ಅಶ್ವತ್ ನಾರಾಯಣ್ ಹೇಳಿದರು.
ಅಲ್ಲದೇ, ಈ ಸಂಸ್ಥೆಗಳ ಅನಿವಾರ್ಯ ಸೇವೆಯಲ್ಲಿರುವವರು ಮನೆಯಿಂದಲೇ ಕೆಲಸ ಮಾಡಬೇಕು, ಎಂದ ಸಚಿವರು, ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.