ನಿಜಾಮುದ್ದಿನ್ ಸಭೆಗೆ ಬೀದರ್ನಿಂದ ತೆರಳಿದ್ದ 11 ಜನರಿಗೆ ಕೊರೊನಾ ಪಾಸಿಟಿವ್! | Janata news
ಬೀದರ್: : ಬೀದರ್ ಜಿಲ್ಲೆಯಲ್ಲಿ ಈವರೆಗೆ ಒಂದೂ ಕೊರೊನಾ ಪ್ರಕರಣ ಇರಲಿಲ್ಲ. 11 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.
ದೆಹಲಿಯ ನಿಜಾಮುದ್ದೀನ್ ಸಭೆ ಗಡಿ ಜಿಲ್ಲೆ ಬೀದರ್ಯಿಂದ ಸಭೆಗೆ 27 ಜನರು ತೆರಳಿದ್ದರು. 27 ಜನರ ಪೈಕಿ 11 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಮಹಾದೇವ ಖಚಿತಪಡಿಸಿದ್ದಾರೆ.
11ರಲ್ಲಿ 9 ಜನ ಬೀದರ್ನ ಓಲ್ಡ್ ಸಿಟಿ ನಿವಾಸಿಗಳು. ಒಬ್ಬರು ಬಸವಕಲ್ಯಾಣ, ಇನ್ನೊಬ್ಬರು ಚಿಟಗುಪ್ಪ ತಾಲೂಕಿನ ಮನ್ನಾಖ್ಖೇಳಿ ನಿವಾಸಿಯಾಗಿದ್ದಾರೆ. ಉಳಿದ 16 ಜನರ ವರದಿ ಬರೋದು ಬಾಕಿ ಇದೆ ಎಂದು ಡಿ.ಸಿ ತಿಳಿಸಿದ್ದಾರೆ.
ಸದ್ಯ ನಿಜಾಮುದ್ದೀನ್ ಮರ್ಕಜ್ ಜಮಾತ್ಗೆ ಹೋಗಿ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿರೋದು ಜನರಲ್ಲಿ ಆತಂಕ ಮೂಡಿಸಿದೆ.