ಕೋವಿಡ್-19 ಅಪ್ಡೇಟ್ : ಚೇತರಿಕೆ ದರ ಈಗ 31.15%, ಡಿಸ್ಚಾರ್ಜ್ ನೀತಿ ಪರಿಷ್ಕರಿಸಿದ ಸರ್ಕಾರ | Janata news
ನವದೆಹಲಿ : ಇಂದು ದೇಶದ ಕೋವಿಡ್-19 ಬೆಳವಣಿಗೆಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ, 4213 ಹೊಸ ಪ್ರಕರಣಗಳು ದಾಖಲಾಗಿದೆ. ಮತ್ತು 1559 ಸೊಂಕಿತರು ಗುಣಮುಖರಾದ ಪ್ರಕರಣಗಳಿವೆ, ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾಹಿತಿ ನೀಡಿದರು.
ಒಟ್ಟು ಗುಣಮುಖರಾದವರ ಸಂಖ್ಯೆ 20917, ಚೇತರಿಕೆ ದರ ಈಗ 31.15% ಆಗಿದೆ. 44029 ಜನರು ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಹಾಗೂ ಒಟ್ಟು ಪ್ರಕರಣಗಳ ಸಂಖ್ಯೆ 67,152 ತಲುಪಿದೆ, ಎಂದು ತಿಳಿಸಿದರು.
ಸರ್ಕಾರದ ಪರಿಷ್ಕೃತ ಡಿಸ್ಚಾರ್ಜ್ ನೀತಿ ಕುರಿತು ಮಾತನಾಡಿದ ಅವರು, ಡಿಸ್ಚಾರ್ಜ್ ನೀತಿಯನ್ನು ಬದಲಾಯಿಸಲಾಗಿದೆ, ಏಕೆಂದರೆ ಹಲವಾರು ದೇಶಗಳು ತಮ್ಮ ನೀತಿಯನ್ನು ಪರೀಕ್ಷಾ ಆಧಾರಿತ ತಂತ್ರದಿಂದ ರೋಗಲಕ್ಷಣ ಮತ್ತು ಸಮಯ ಆಧಾರಿತ ತಂತ್ರಕ್ಕೆ ಬದಲಾಯಿಸಿವೆ. ಇದರ ಆಧಾರದ ಮೇಲೆ ನಾವು ಇದನ್ನು ಬದಲಾಯಿಸಿದ್ದೇವೆ, ಎಂದು ಸ್ಪಷ್ಟನೆ ನೀಡಿದ್ದಾರೆ.
ಪರಿಷ್ಕೃತ ನೀತಿಯ ಪ್ರಕಾರ, ಕೋವಿಡ್-19 ಆರೈಕೆ ಶಿಬಿರಕ್ಕೆ ದಾಖಲಾದ ಸಾಧಾರಣ/ ಅತಿ ಸಾಧಾರಣ/ ಪೂರ್ವ-ರೋಗಲಕ್ಷಣದ ಪ್ರಕರಣಗಳನ್ನು ರೋಗಲಕ್ಷಣಗಳು ಕಾಣಿಸಿಕೊಂಡ 10 ದಿನಗಳ ನಂತರ ಮತ್ತು 3 ದಿನಗಳವರೆಗೆ ಜ್ವರವಿಲ್ಲದಿದ್ದರೆ, ಬಿಡುಗಡೆ ಮಾಡಬಹುದು. ಡಿಸ್ಚಾರ್ಜ್ ಮೊದಲು ಪರೀಕ್ಷಿಸುವ ಅಗತ್ಯವಿಲ್ಲ, ಡಿಸ್ಚಾರ್ಜ್ ನಂತರ ಮನೆ ಪ್ರತ್ಯೇಕತೆಗೆ ಸಲಹೆ ನೀಡಲಾಗುತ್ತದೆ, ಎಂದು ತಿಳಿಸಿದ್ದಾರೆ.
ಕೋವಿಡ್-19 ಹರಡುವಿಕೆಯ ಸಮುದಾಯವಾರು ಮ್ಯಾಪಿಂಗ್ ಅನ್ನು ಸರ್ಕಾರ ಚಿಂತಿಸುತ್ತಿದೆ, ಎಂಬ ವರದಿಗಳ ಕುರಿತು ಮಾತನಾಡಿದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್, ಇದು ತುಂಬಾ ಬೇಜವಾಬ್ದಾರಿಯುತ ಸುದ್ದಿಯ ತುಣುಕು ಆಗಿದೆ. ಕೋವಿಡ್-19 ಜನರ ಜಾತಿ, ಮತ ಅಥವಾ ಧರ್ಮವನ್ನು ನೋಡುವುದಿಲ್ಲ, ಎಂದು ತಿಳಿಸಿದ್ದಾರೆ.
Health Ministry has issued a revised discharge policy for confirmed #COIVD19 patients: @MoHFW_INDIA
— PIB India #StayHome #StaySafe (@PIB_India) May 11, 2020
📒https://t.co/Han0H564KN pic.twitter.com/VotHvlcIWl