ಎರಡು ದಿನದ ಹಿಂದೆ ತೋಡಿದ ಕೊಳವೆ ಬಾವಿಗೆ ಬಿದ್ದ ರೈತನ ಆತ್ಮಹತ್ಯೆ! | Janata news
ಬೆಳಗಾವಿ : ಬೆಳೆಗಾಗಿ ಹೊಲದಲ್ಲಿ ಕೊರೆಸಿದ ಕೊಳವೆ ಬಾವಿಗೆ ನೀರು ಬರದೇ ಹಿನ್ನೆಲೆಯಲ್ಲಿ ಅದೇ ಕೊಳವೆ ಬಾವಿಗೆ ರೈತ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ್ ಗ್ರಾಮದಲ್ಲಿ ನಡೆದಿದೆ.
ರಾಯಬಾಗ ತಾಲ್ಲೂಕಿನ ಸುಲ್ತಾನಪುರ್ ಗ್ರಾಮದ ರೈತ ಲಕ್ಕಪ್ಪ ದೊಡ್ಡಮನಿ (38) ಮೃತ ದುರ್ದೈವಿ. ಸೋಮವಾರ ಬೆಳಿಗ್ಗೆ ಕೊಳವೆ ಬಾವಿ ಸಮೀಪ ಅವರ ಶರ್ಟ್ ಮತ್ತು ಪಂಚೆ ಕಂಡುಬಂದಿದ್ದು ಕೊಳವೆಬಾವಿಯಲ್ಲಿ ಗಮನಿಸಿದಾಗ ಬಾವಿಯೊಳಗೆ ಸಿಲುಕಿರುವುದು ಗೊತ್ತಾಗಿದೆ.
ಈತ ಸುಮಾರು 20 ಅಡಿ ಆಳದಲ್ಲಿ ಕೊಳವೆ ಬಾವಿಯಲ್ಲಿ ಸಿಲುಕಿದ್ದು, ಸದ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೇಸಿಗೆ ಸಂದರ್ಭದಲ್ಲಿ ನೀರಿನ ಭವನೆ ಹಾಗೂ ಬೆಳೆಗಳಿಗೆ ನೀರಿನ ಕೊರತೆ ನಿಗಿಸಲು, ಹೊಲದಲ್ಲಿ ಎರಡು ದಿನಗಳ ಹಿಂದೆ ಕೊಳವೆ ಬಾವಿ ಕೊರಿಸಿದ್ದ, ಕೊಳವೆ ಭಾವಿ ಸುಮಾರು ೫೦೦ ಅಡಿಯಷ್ಟೂ ಆಳ ತೆಗೆದರೂ ನೀರು ಬರಲಿಲ್ಲ. ಇದರಿಂದ ರೈತ ನೊಂದಿದ್ದ. ಬಾವಿಗೆ ನೀರು ಬರಲಿಲ್ಲವೆಂದು, ಆತಂಕಗೊಂಡ ರೈತ ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಈ ಕೊಳವೆ ಬಾವಿ ಮೇಲ್ಭಾಗದಲ್ಲಿ ಅಗಲವಾಗಿದ್ದು, ಸುಮಾರು ಅಡಿ ಬಳಿಕ ಚಿಕ್ಕದಾಗಿರುವುದರಿಂದ ಮೇಲ್ಭಾಗದಿಂದ ರೈತನ ಕೈಗಳು ಕಾಣುತ್ತಿದ್ವವು. ಕೊಳವೆ ಬಾವಿಯ ಪಕ್ಕದಲ್ಲಿಯೇ ಆತನ ಅಂಗಿ, ಪ್ಯಾಂಟ್ ಬಿದ್ದಿದೆ.
ಬಹಳ ಸತತ ಮೂರು ಗಂಟೆಗಳ ಕಾರ್ಯಚರಣೆ ಮಾಡಿ ಹೊರ ತೆಗೆಯುಷ್ಟರಲ್ಲಿ ಮೃತ ಹೊಂದಿದ್ದ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ರಾಯಬಾಗ ತಹಸೀಲ್ದಾರ, ತಾಪಂ ಇಒ, ಪೊಲಿಸ್ ಹಾಗೂ ಅಗ್ನಿಶಾಮ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.