ಸ್ವಾವಲಂಭಿ ಭಾರತದ ರೂ.20 ಲಕ್ಷ ಕೋಟಿ ಪ್ಯಾಕೇಜ್ ಬಾಗ-1 ವಿವರ ನೀಡಿದ ವಿತ್ತ ಸಚಿವರು | Janata news
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರುಪಾಯಿಯ ಬೃಹತ್ ಪ್ಯಾಕೇಜ್ ಭಾರತವನ್ನು ಸ್ವಾವಲಂಭಿಯಾಗಿಸುವ ದೂರದೃಷ್ಟಿ ಹೊಂದಿದೆ. ಐದು ಸ್ತಂಭಗಳಾದ ಆರ್ಥಿಕತೆ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಮೂಲಸೌಕರ್ಯ, ಡೆಮಾಗ್ರಫಿ (ಜನಸಂಖ್ಯೆ) ಮತ್ತು ಬೇಡಿಕೆ ಆಧಾರದಲ್ಲಿ ಭಾರತವನ್ನು ಸ್ವಾವಲಂಭಿಯಾಗಿರುವ ಪ್ಯಾಕೇಜ್ ಇದಾಗಿದೆ. ಹಾಗಾಗಿ ಇದನ್ನು ಆತ್ಮ ನಿರ್ಭರ್ ಭಾರತ್ ಎನ್ನಲಾಗಿದೆ.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅವರ ಅಡಿಯಲ್ಲಿ ರೂ.1.70 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್. ಕರೋನಾ ವೈರಸ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಬಡವರಿಗೆ ಸಹಾಯ ಮಾಡಲು ಯೋಜನೆ:
• ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ ಮೌಲ್ಯದ ಇನ್ಸೂರೆನ್ಸ್.
• ಮುಂದಿನ 3 ತಿಂಗಳು - 80 ಕೋಟಿ ಬಡವರಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಗೋಧಿ ಅಥವಾ ಅಕ್ಕಿ ಲಾಭವನ್ನು ನೀಡಲಾಗಿದೆ.
• ಮುಂದಿನ 3ತಿಂಗಳು - ಪ್ರತಿ ತಿಂಗಳು 1 ಕೆಜಿ ದ್ವಿದಳ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ.
• ಮುಂದಿನ 3 ತಿಂಗಳು - 20 ಕೋಟಿ ಮಹಿಳೆಯರು ಜನ ಧನ್ ಖಾತೆದಾರರಿಗೆ ತಿಂಗಳಿಗೆ ರೂ.500/-
• ಮುಂದಿನ 3 ತಿಂಗಳು - ಗ್ಯಾಸ್ ಸಿಲಿಂಡರ್ಗಳನ್ನು 8 ಕೋಟಿ ಬಡ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುತ್ತದೆ.
• ಎಂಎನ್ಆರ್ಇಜಿಎ ವೇತನದಲ್ಲಿ ದಿನಕ್ಕೆ ರೂ.182 ರಿಂದ ರೂ.202 ಹೆಚ್ಚಳ 13.62 ಕೋಟಿ ಕುಟುಂಬಗಳು ಲಾಭ ಪಡೆಯಲಿದೆ.
• ರೂ.1,000 ಪರಿಹಾರ - 3 ಕೋಟಿ ಬಡ-ಹಿರಿಯ ನಾಗರಿಕ, ಬಡ-ವಿಧವೆಯರ ಮತ್ತು ಬಡ-ದಿವ್ಯಾಂಗ್ ಜನರಿಗೆ.
• ಸಣ್ಣ ಕೈಗಾರಿಕೆಗಳಿಗೆ 3ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರಿಂದ 45 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಡಮಾನವಿಲ್ಲದೆ ಸಾಲ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. 25 ರಿಂದ 100 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.
• ಸಾಲ ಮರುಪಾವತಿಗೆ ನಾಲ್ಕು ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ಬ್ಯಾಂಕುಗಳು ನೀಡುವ ಸಾಲಕ್ಕೆ ಕೇಂದ್ರ ಸರಕಾರವೇ ಗ್ಯಾರಂಟಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
• ಸಣ್ಣ ಕೈಗಾರಿಕೆಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಹಣ ಇಲ್ಲದಿದ್ದರೆ, ಕೇಂದ್ರ ನೆರವು ನೀಡುತ್ತದೆ. ಅಕ್ಟೋಬರ್ 31ರವರೆಗೆ ಕೈಗಾರಿಕೆಗಳು ಸಾಲ ಪಡೆಯಬಹುದು.
• 200 ಕೋಟಿ ರೂಪಾಯಿ ವರೆಗೆ ಜಾಗತಿಕ ಟೆಂಡರ್ ಇಲ್ಲ. ವಿದೇಶಿ ಕಂಪನಿಗಳಿಗೆ ಟೆಂಡರ್ನಲ್ಲಿ ಅವಕಾಶ ಇಲ್ಲ. ಇನ್ನು ಮುಂದೆ ಸೇವಾ ವಲಯ ಮತ್ತು ಉತ್ಪಾದನಾ ವಲಯ ಎರಡೂ ಒಂದೇ ಆಗಲಿವೆ.
• ಸಣ್ಣ ಕೈಗಾರಿಕೆಗಳಿಗೆ ಸರಕಾರ ಉಳಿಸಿಕೊಂಡಿರುವ ಬಾಕಿಯನ್ನು ವಾಪಸ್ ಕೊಡಲಿದ್ದೇವೆ. ಮುಂದಿನ 45 ದಿನಗಳಲ್ಲಿ ಬಾಕಿ ವಾಪಸ್ ನೀಡಲಾಗುವುದು. 15 ಸಾವಿರ ರೂಪಾಯಿ ಒಳಗೆ ಸಂಬಳ ತೆಗೆದುಕೊಳ್ಳುವ ಉದ್ಯೋಗಿಗಳಿಗೆ ಕೂಡಲೇ ಇಪಿಎಫ್ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.
• ಕೊರೊನಾ ವೈರಸ್ ಲಾಕ್ಡೌನ್ ಪರಿಣಾಮವಾಗಿ ವಿದ್ಯುತ್ ಸರಬರಾಜು ಕಂಪನಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆಂದೇ 90 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಿಂದ ಈ ಕಂಪನಿಗಳು ನಷ್ಟವನ್ನು ಭರಿಸಲಿವೆ ಎಂದಿದ್ದಾರೆ.
• ಕೊರೊನಾವನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಿ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕೇಂದ್ರ ಸರಕಾರ ರಿಲೀಫ್ ನೀಡಿದೆ. ಕೊರೊನಾವನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಲು ಸೂಚಿಸಲಾಗಿದೆ. ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ.
• ಟಿಡಿಎಸ್/ ಟಿಸಿಎಸ್ಗಳಿಗೆ ಶೇ.25ರಷ್ಟು ಕಡಿತ ಮಾಡಿದೆ. ಇದರಿಂದ ಜನರಿಗೆ 50 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಲಿದೆ. ಇದು ನಾಳೆಯಿಂದಲೇ ಜಾರಿಯಾಗಿ 2021ರ ಮಾರ್ಚ್ ವರೆಗೆ ಜಾರಿಯಲ್ಲಿರುತ್ತದೆ. ಆದಾಯ ತೆರಿಗೆ ಪಾವತಿ ಮಾಡುವರಿಗೆ ಈಗಾಗಲೇ ಐಟಿ ರೀಫಂಡ್ ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.