ನೇಪಾಳವು ಭಾರತದ ಲಿಪುಲೆಖ್ ರಸ್ತೆಯನ್ನು ಚೀನಾದ ಆಜ್ಞೆ ಮೇರೆಗೆ ಆಕ್ಷೇಪಿಸಿದೆ : ಸುಳಿವು ನೀಡಿದ ಸೇನಾ ಮುಖ್ಯಸ್ಥ | Janata news
ನವದೆಹಲಿ : ಇತ್ತೀಚಿಗೆ ಚಾಲನೆ ನೀಡಲಾದ ಉತ್ತರಾಖಂಡದ ಲಿಪುಲೆಖ್ಗೆ ಭಾರತದ ಹೊಸ ರಸ್ತೆಗೆ, ನೇಪಾಳ ಮಾಡುತ್ತಿರುವ ಆಕ್ಷೇಪಣೆ ಬೇರೊಬ್ಬರ ಆಜ್ಞೆಯ ಮೇರೆಗೆ ಎಂದು ಭಾರತೀಯ ಭೂಸೇನೆಯ ಜನರಲ್ ಎಂ.ಎಂ.ನರವಣೆ ಅವರು ವೆಬ್ನಾರ್ನಲ್ಲಿ # ಚೀನಾ ಕಡೆಗೆ ಸುಳಿವು ನೀಡಿದ್ದಾರೆ
ಚೀನಾದ ಪಾತ್ರದ ಕುರಿತು ನೀಡಿದ ಸ್ಪಷ್ಟ ಸೂಚನೆಯೊಂದರಲ್ಲಿ, ಭಾರತ ಹಾಕುತ್ತಿರುವ ಉತ್ತರಾಖಂಡದ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ ರಸ್ತೆಯನ್ನು ಬೇರೊಬ್ಬರ ಆಜ್ಞೆಯ ಮೇರೆಗೆ ನೇಪಾಳ ಆಕ್ಷೇಪಿಸಿದೆ ಎಂದು ನಂಬಲು ಕಾರಣಗಳಿವೆ, ಎಂದು ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಇಂದು ಶುಕ್ರವಾರ ಹೇಳಿದ್ದಾರೆ. ಸೈನ್ಯವು ಚೀನಾದ ಮಿಲಿಟರಿಯೊಂದಿಗೆ ಮುಖಾಮುಖಿ ಘಟನೆಗಳನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ನಿರ್ವಹಿಸುತ್ತಿದೆ, ಎಂದು ಅವರು ಪ್ರತಿಪಾದಿಸಿದ್ದಾರೆ.
ರಕ್ಷಣಾ ಥಿಂಕ್-ಟ್ಯಾಂಕ್ ದಲ್ಲಿ ನಡೆದ ಸಂವಾದದಲ್ಲಿ ಜನರಲ್ ನರವಣೆ, ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಎರಡು-ಮುಂಭಾಗದ ಯುದ್ಧದ ಸನ್ನಿವೇಶಕ್ಕೆ ಭಾರತವು ಎಚ್ಚರದಿಂದ ಇರಬೇಕಾಗುತ್ತದೆ, ಎಂದು ಹೇಳಿದರೂ, ಪ್ರತಿಯೊಂದು ಮುಖಾಮುಖಿಯು ಅಂತಹ ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆಯನ್ನು ಅವರು ಅಲ್ಲಗಳೆದರು.
ಟೂರ್ ಆಫ್ ಡ್ಯೂಟಿ (ಟಿಒಡಿ) ಪರಿಕಲ್ಪನೆಯಡಿ ಮೂರು ವರ್ಷಗಳ ಅವಧಿಗೆ ಯುವಕರನ್ನು ಸೇರಿಸಲು ಸೇನೆಯ ದೊಡ್ಡ ಪ್ರಸ್ತಾಪದ ಕುರಿತು ಮಾತನಾಡಿದ ಜನರಲ್ ನರವಣೆ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪ್ರತಿಕ್ರಿಯೆಯ ನಂತರ, ಸೈನ್ಯದಲ್ಲಿ ಶಾಶ್ವತ ವೃತ್ತಿಜೀವನವನ್ನು ಆರಿಸದೆ ಮಿಲಿಟರಿ ಜೀವನವನ್ನು ಅನುಭವಿಸಲು ಅವರು ಬಯಸುತ್ತಾರೆ ಎಂಬ ಈ ಕಲ್ಪನೆಯು ಮೊಳಕೆಯೊಡೆದಿದೆ. ಪಿಂಚಣಿ ಪಾವತಿ ಮತ್ತು ಇತರ ಸವಲತ್ತುಗಳ ಕಾರಣದಿಂದಾಗಿ ಆಗುತ್ತಿರುವ ಆದಾಯ ವೆಚ್ಚವನ್ನು ಕಡಿತಗೊಳಿಸಲು ಸೈನ್ಯಕ್ಕೆ ಟಿಒಡಿ ಸಹಾಯ ಮಾಡುತ್ತದೆ, ಎಂದು ಜನರಲ್ ನರವಣೆ ಹೇಳಿದರು.
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಿಂದ ಖರ್ಚನ್ನು ಶೇಕಡಾ 20ರಷ್ಟು ಕಡಿತಗೊಳಿಸುವಂತೆ ಸರ್ಕಾರದಿಂದ ಸೇನೆಗೆ ಆದೇಶ ಬಂದಿದೆ, ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತನ್ನ ಯುದ್ಧ ಸನ್ನದ್ಧತೆಗೆ ಯಾವುದೇ ರಾಜಿ ಮಾಡಿಕೊಳ್ಳದೆ ಸೇನೆಯು ಅದನ್ನು ಕಾರ್ಯಗತಗೊಳಿಸುತ್ತಿದೆ, ಎಂದು ಹೇಳಿದರು.
ಸೈನಿಕರ ಭಾರಿ ಪ್ರಮಾಣದ ಚಲನೆಯನ್ನು ನಿರ್ಬಂಧಿಸುವುದು ಸೇರಿದಂತೆ ವಿವಿಧ ಕ್ರಮಗಳ ಮೂಲಕ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ, ಎಂದು ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಮತ್ತು ಅನಾಲಿಸಿಸ್ ಆಯೋಜಿಸಿರುವ ವಿಡಿಯೋ-ಕಾನ್ಫರೆನ್ಸ್ ನಲ್ಲಿ ಸೇನಾ ಮುಖ್ಯಸ್ಥರು ಹೇಳಿದರು.