ಬೆಂಗಳೂರಿನಲ್ಲಿ ಇವತ್ತು ಶಬ್ದ ಹೇಗೆ ಕೇಳಿ ಬಂತು? ಭೂಕಂಪ/ಸ್ಪೋಟಕ/ವಾತಾವರಣ/ವಿಮಾನ | Janata news
ಬೆಂಗಳೂರು : ಇಂದು ಬುಧವಾರ ಮಧ್ಯಾಹ್ನ 1:25ರ ಆಸುಪಾಸು ಬೆಂಗಳೂರಿನ ಕೆಲವು ಭಾಗಗಳಲ್ಲಿ ನಿವಾಸಿಗಳು ಒಂದು ರೀತಿಯ ದೊಡ್ಡ ನಿಗೂಡ ಶಬ್ದವನ್ನು ಕೇಳಿ, ಆತಂಕದ ವಾತಾವರಣ ಸೃಷ್ಟಿಗೆ ಕಾರಣವಾಯಿತು. ನಂತರ ನೆಟಿಜನ್ಗಳು ಸಾಮಾಜಿಕ ತಾಣಗಳಲ್ಲಿ ತಮ್ಮ ಆತಂಕವನ್ನು ಪರಿಸ್ಥಿತಿಯನ್ನು ವ್ಯಕ್ತಪಡಿಸಿದರು.
ಬೆಂಗಳೂರಿನ ಅನೇಕ ಭಾಗಗಳಲ್ಲಿ ಕೇಳಿ ಬಂದ ಒಂದು ಅಬ್ಬರದ ಶಬ್ದವು ಸೂಪರ್ಸಾನಿಕ್ ವಿಮಾನದಿಂದ, ಭೂಕಂಪದಿಂದ, ಸ್ಪೋಟಕ ಅಥವಾ ಶೀತ ಮತ್ತು ಬೆಚ್ಚಗಿನ ಗಾಳಿಯ ಘರ್ಷಣೆಯಿಂದ ಉಂಟಾಗಿದೆಯೋ? ಇವುಗಳಲ್ಲಿ ಯಾವುದಾದರೂ ಆಗಿರಬಹುದು, ಆದರೆ ಅಧಿಕಾರಿಗಳು ಭೂಕಂಪವನ್ನು ಅಧಿಕೃತವಾಗಿ ತಳ್ಳಿಹಾಕಿದ್ದಾರೆ.
ಪೂರ್ವ ಬೆಂಗಳೂರಿನಾದ್ಯಂತ ಅಬ್ಬರದ ಶಬ್ದ ಕೇಳಿಸಿತು. ನಾವು ಧ್ವನಿಯ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ನಾವು ವೈಟ್ಫೀಲ್ಡ್ ಪ್ರದೇಶದಲ್ಲಿ ನೆಲದ ಮೇಲೆ ಶೋಧ ನಡೆಸಿದ್ದೇವೆ ಆದರೆ ಇಲ್ಲಿಯವರೆಗೆ ಯಾವುದಕ್ಕೂ ಹಾನಿಯಾಗಿಲ್ಲ, ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್.ಅನುಚೆತ್ ಹೇಳಿದ್ದರು.
ವಿವರಗಳ ಪ್ರಕಾರ, ಬೆಂಗಳೂರಿನ ವೈಟ್ಫೀಲ್ಡ್, ಮಾರತಹಳ್ಳಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಧ್ಯಾಹ್ನ ದೊಡ್ಡ ಶಬ್ದ ಕೇಳಿಸಿತು. ಕೆಲವು ನಿವಾಸಿಗಳು ತಾವು ಸಿಡಿಮದ್ದಿನ ಸದ್ದು ಎಂದು ಹೇಳಿದರೆ, ಕೆಲವರು ಮಿರಾಜ್2000 ಹಾರಾಟ ನಡೆಸಿರಬಹುದು ಎಂದಿದ್ದಾರೆ. ಇತರರು ತಮ್ಮ ಮನೆಗಳು ನಡುಗುತ್ತಿವೆ ಮತ್ತು ಕಿಟಕಿಗಳು ಐದು ಸೆಕೆಂಡುಗಳ ಕಾಲ ಸದ್ದು ಮಾಡುತ್ತಿವೆ ಹಾಗೂ ಭೂಕಂಪ ಎಂದು ಭಾವಿಸಿದ್ದರು.
ಬಹುತೇಕ ಬೆಂಗಳೂರು ನಗರ ಭಾಗಗಳಲ್ಲಿ ಅನುಭವಕ್ಕೆ ಬಂದಿರುವ ಈ ಶಬ್ದವನ್ನು ರಾಮಮೂರ್ತಿ ನಗರ, ಎಚ್ಎಎಲ್, ಹಳೆ ಮದ್ರಾಸ್ ರಸ್ತೆ, ಉಲಸೂರು, ಕುಂದನಹಳ್ಳಿ, ಕಮ್ಮನಹಳ್ಳಿ, ಸಿ.ವಿ.ರಾಮನ್ ನಗರ, ಹೊಸೂರು ರಸ್ತೆ, ವೈಟ್ಫೀಲ್ಡ್ ಮತ್ತು ಎಚ್ಎಸ್ಆರ್ ಬಡಾವಣೆಗಳಲ್ಲಿ ಕೇಳಿಸಿದೆ ಎಂದು ಸ್ಥಳಿಯರು ದೂರಿದ್ದಾರೆ. ಬೆಂಗಳೂರು ಪಶ್ಚಿಮ ಬಾಗಗಳಾದ ನಾಗರಭಾವಿಯಲ್ಲೂ ಕೆಲವರು ಈ ಕುರಿತು ಹೇಳಿದ್ದಾರೆ.
ಏತನ್ಮಧ್ಯೆ, ನಗರದಲ್ಲಿ ಎಲ್ಲಿಯೂ ಯಾವುದೇ ಹಾನಿ ಸಂಭವಿಸಿಲ್ಲ, ಆದರೆ, ಸುಖೋಯಿ30 ಯುದ್ಧ ವಿಮಾನದ ಪರೀಕ್ಷಣಾ ಹಾರಾಟ ನಡೆಯುತ್ತಿದೆ ಎಂದು ಕೆಲವರು ಹೇಳಿದ್ದರೂ, ಅಧಿಕೃತವಾಗಿ ಯಾವುದೂ ಬಯಲಾಗಿಲ್ಲ. ಇದು ವಿಮಾನವೇ ಎಂದು ಪರೀಕ್ಷಿಸಲು ವಾಯುಪಡೆಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲಾಗಿತ್ತಾದರೂ, ಯಾವುದೇ ಸಮರ್ಪಕ ಮಾಹಿತಿ ತಿಳಿದುಬಂದಿಲ್ಲ.