ರಾಜ್ಯ ಸರ್ಕಾರದಿಂದ ಅರ್ಚಕರಿಗೆ 3 ತಿಂಗಳ ಗೌರವ ಧನ ಬಿಡುಗಡೆ: ಆನ್ ಲೈನ್ ಪೂಜೆಗೆ ಅವಕಾಶ! | Janata news
ಬೆಂಗಳೂರು : ಕೋವಿಡ್-19 ಲಾಕ್ ಡೌನ್ ಕಾರಣದಿಂದ ರಾಜ್ಯದ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಸ್ಥಗಿತವಾಗಿದೆ. ಸಾವಿರಾರು ಅರ್ಚಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ರಾಜ್ಯ ಸರ್ಕಾರ ಅರ್ಚಕರ ನೆರವಿಗೆ ಧಾವಿಸಿದ್ದು, ಮೂರು ತಿಂಗಳ ಗೌರವ ಧನ ಬಿಡುಗಡೆ ಮಾಡಿದೆ.
ದೇವಾಲಯಗಳು ತೆರೆಯದ ಹಿನ್ನೆಲೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳ 29, 700 ಅರ್ಚಕರಿಗೆ ಸರ್ಕಾರ ನೆರವು ನೀಡಿದೆ. ಮೂರು ತಿಂಗಳ ಗೌರವ ಧನವಾಗಿ 33.65 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅಲ್ಲದೇ ಅರ್ಚಕರಿಗೆ ಇಲಾಖೆ ವತಿಯಿಂದಲೇ ಆಹಾರದ ಕಿಟ್ಗಳನ್ನು ಹಂಚಿಕೆ ಮಾಡಲಾಗಿದೆ.
ದೇವಾಲಯಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ನೀಡಲು ನಿರ್ಧಾರಿಸಲಾಗಿದೆ. ಮೇ 26ರಿಂದ ಅವಕಾಶ ನೀಡಲಾಗುವುದು ಎಂದರು. ಇನ್ನೊಂದು ವಾರದ ಒಳಗೆ ಆನ್ಲೈನ್ ದರ್ಶನ ಸಂಪೂರ್ಣ ಮಾಹಿತಿಯನ್ನು ಜನರಿಗೆ ತಿಳಿಸಲಾಗುವುದು ಅಂದಿದ್ದಾರೆ
ಇನ್ನು ಮೊದಲ ಹಂತದಲ್ಲಿ ಮುಜರಾಯಿ ಇಲಾಖೆ 16 ಜಿಲ್ಲೆಯ ದೇವಸ್ಥಾನಗಳಲ್ಲಿ ಆನ್ಲೈನ್ ದರ್ಶನ ಸೇವೆ ಸಿಗಲಿದೆ. ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬನಶಂಕರಿ ಸೇರಿದಂತೆ 50 ದೇವಾಲಯಗಳಲ್ಲಿ ಅವಕಾಶ ನೀಡಲಾಗುವುದು ಎಂದರು.
ಪೂಜ ಸೇರಿದಂತೆ ಲೈವ್ ದರ್ಶನ ವ್ಯವಸ್ಥೆ ಮಾಡಲಾಗುವುದು, ರಥೋತ್ಸವದಂತಹ ಕಾರ್ಯಕ್ರಮ , ಹೆಚ್ಚು ಜನ ಸೇರುವ ಕಾರ್ಯಕ್ರಮ ಹೊರತುಪಡಿಸಿ ಇನ್ನೆಲ್ಲಾ ರೀತಿಯ ಕಾರ್ಯಕ್ರಮ ತೋರಿಸಲಾಗುವುದು ಎಂದರು.