ತಬ್ಲಿಘಿಗಳ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕು, ಕ್ಷಮೆಗೆ ಅರ್ಹರಲ್ಲ : ಶೋಭಾ ಕರಂದ್ಲಾಜೆ | Janata news
ಉಡುಪಿ : ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಮೋದಿ ಸರ್ಕಾರ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಸಾಧನೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಕೊರೊನಾ ಬಗ್ಗೆ ಮಾತನಾಡಿ, ದೇಶಾದ್ಯಂತ ಕೊರೋನಾವೈರಸ್ ಹರಡುವಂತೆ ಮಾಡುವುದು ತಬ್ಲಿಘಿ ಜಮಾತ್ ಸದಸ್ಯರ ವ್ಯವಸ್ಥಿತ ಯೋಜನೆಯಾಗಿದೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಅವರು ಕ್ಷಮೆಗೆ ಅರ್ಹರಲ್ಲ. ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ ಎಂದರು.
ಕೊಳೆಗೇರಿ ಪ್ರದೇಶಗಳಲ್ಲಿ ಈ ಸಾಂಕ್ರಾಮಿಕ ರೋಗವನ್ನು ಹರಡುವ ಯೋಜನೆ ಅವರದಾಗಿದ್ದು ಪಾದರಾಯಣಪುರ, ಸಿದ್ದಿಕಿ ಲೇಔಟ್ ಘಟನೆ ಇದಕ್ಕೆ ತಾಜಾ ಉದಾಹರಣೆ, ಸೂಕ್ತ ತನಿಖೆ ಆಗಬೇಕಿದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ವಿಶ್ವಗುರು ಆಗಬೇಕೆಂಬ ಕನಸು ಕಂಡ ಭಾರತದ ಉತ್ಸಾಹವನ್ನು ಕೊರೊನಾ ಕುಗ್ಗಿಸಿದೆ. ಇದೀಗ ದೇಶವು ಆರ್ಥಿಕ ಸಂಕಷ್ಟದಲ್ಲಿದೆ. ಒಟ್ಟು 640 ಕೋವಿಡ್ -19 ಪರೀಕ್ಷಾ ಪ್ರಯೋಗಾಲಯಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.