ನೇಪಾಳಿ ನಾಗರೀಕ ಎಂದು ಬಿಂಬಿಸಿ, ಷಡ್ಯಂತ್ರದ ಸುಳ್ಳು ವೀಡಿಯೊ ಸೃಷ್ಟಿ : 6 ಬಂಧನ | Janata news
ವಾರಾಣಸಿ : ಭಾರತೀಯ ನಾಗರಿಕನಿಗೆ ನೇಪಾಳಿ ಎಂದು ತೋರಿಸಿ, ಆತನಿಗೆ ಹಣವನ್ನು ಪಾವತಿ ಮಾಡಿ ನಾಟಕದ ದೌರ್ಜನ್ಯದ ಕಥೆಯನ್ನು ರೂಪಿಸಿ ವಿದೇಶಿ ನೀತಿಯನ್ನು ವಿಫಲ ಎಂದು ಸಾಬೀತುಪಡಿಸುವ ಉದ್ದೇಶ ಹೊಂದಿರುವ ತಂಡದಲ್ಲಿ 6 ಜನರನ್ನು ಬಂಧಿಸಲಾಗಿದೆ ಎಂದು ವಾರಾಣಸಿ ಪೋಲಿಸ್ ಪ್ರಕಟಿಸಿದೆ.
ಇತ್ತೀಚೆಗೆ ನೇಪಾಳಿ ವ್ಯಕ್ತಿಯೊಬ್ಬನನ್ನು ತಲೆ ಬೋಳಿಸಿ, ಆತನಿಂದ ಜೈ ಶ್ರೀ ರಾಮ್, ಎಂದು ಜಪಿಸಲು ಒತ್ತಾಯಿಸಿದ ಘಟನೆ ರಾಷ್ಟ್ರದಾದ್ಯಂತ ಸಾಕಷ್ಟು ಬಿರುಗಾಳಿಯನ್ನು ಸೃಷ್ಟಿಸಿತ್ತು. ಈ ಘಟನೆಗೆ ಮಾಧ್ಯಮಗಳು, ಹಿಂದೂ ಸಂಘಟನೆಗಳನ್ನು ದೂಷಿಸಿದ ನಂತರ, ನೇಪಾಳಿ ವ್ಯಕ್ತಿಯ ಮೇಲೆ ಈ ದುಷ್ಕೃತ್ಯ ಎಸಗಲು ಕಾರಣವಾದ ವ್ಯಕ್ತಿ ಅರುಣ್ ಪಾಠಕ್ ಎಂಬುದು ಬೆಳಕಿಗೆ ಬಂದಿದ್ದು, ಇತನು ಶಿವಸೇನೆಗೆ ಸೇರಿದವನಾಗಿರುವ ಎನ್ನಲಾಗಿದೆ.
ಈ ವೀಡಿಯೊದಲ್ಲಿ ನೇಪಾಳಿ ಎಂದು ತೋರಿಸಲ್ಪಟ್ಟ ವ್ಯಕ್ತಿ ವಾರಾಣಸಿ ಮೂಲದವನು ಹಾಗೂ ಈತನ ಜನನ ವಾರಾಣಸಿಯಲ್ಲೇ ಆಗಿದೆ ಎಂದು ವಾರಾಣಸಿ ಪೋಲಿಸ್ ಹೇಳಿದೆ. ಇದಲ್ಲದೇ, ಈತನ ಕುಟುಂಬದವರು ಸರ್ಕಾರಿ ಕೆಲಸದಲ್ಲಿದ್ದಾರೆ, ಎನ್ನ್ನಲಾಗಿದೆ.
ಲಾಕ್ ಡೌನ್ ನಂತರ ಹಿಂದಿನ ನಾಲ್ಕು ತಿಂಗಳುಗಳ ಕಾಲ ತಾನು ನಿರುದ್ಯೋಗಿಯಾಗಿದ್ದೆ, ಎಂದು ಧರ್ಮೇಂದ್ರ ಸಿಂಗ್ ಎಂದು ಗುರುತಿಸಲ್ಪಟ್ಟ ಯುವಕ ಹೇಳಿದ್ದಾನೆ, ಎಂದು ಅಮರ್ ಉಜಲಾ ವರದಿ ಹೇಳಿದೆ. ಇತನು ಮೊದಲು ಅವರು ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ, ಎರಡು ಗಂಟೆಗಳ ಕಾಲದ ಕೆಲಸ ಸುಲಭವಾಗಿ ರೂ.1000 ಹಣ ಸಿಗುವುದು ಮತ್ತು ಕೂದಲು ಯಾವಾಗಲೂ ಮತ್ತೆ ಬೆಳೆಯುತ್ತದೆ. ಎಂಬ ಕಾರಣಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾನೆ.
ಸದ್ಯದ ಗಡಿ ಉದ್ನಿಘ್ನತೆ ಮಧ್ಯೆ, ದೇಶದ ವಿದೇಶಾಂಗ ನೀತಿಯ ಮೇಲೆ ಕಪ್ಪು ಚುಕ್ಕೆ ಹಚ್ಚುವ ಪ್ರಯತ್ನ ಇದಾಗಿರುವ ಸಾಧ್ಯತೆಗಳಿಗೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.