ಸೂಕ್ತ ಚಿಕಿತ್ಸೆ ಸಿಗದೇ 7 ತಿಂಗಳ ಮಗು ಸಾವು! | Janata news
ರಾಮನಗರ: : ಚನ್ನಪಟ್ಟಣದಲ್ಲಿ ಚಿಕಿತ್ಸೆ ಸಿಗದೇ 7 ತಿಂಗಳ ಹೆಣ್ಣು ಮಗು ಸಾವನ್ನಪ್ಪಿರೋ ಘಟನೆ ನಡೆದಿದೆ.
ನಗರದ ಪೇಟೆಚೇರಿ ನಿವಾಸಿ ಪ್ರದೀಪ್ ಅವರ ಏಳು ತಿಂಗಳ ಮಗುವಿಗೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ದಂಪತಿಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆ ಆಸ್ಪತ್ರೆಯಲ್ಲಿ, ಮಕ್ಕಳ ವೈದ್ಯರು ಇಲ್ಲಿಲ್ಲ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಮಕ್ಕಳ ತಜ್ಞರ ಬಳಿ ಹೋದಾಗಲೂ, ಮಗುವಿನ ಸ್ಥಿತಿ ಗಂಭೀರವಾಗಿದೆ. ಬೇರೆಡೆ ಕರೆದುಕೊಂಡು ಹೋಗಿ ಎನ್ನುವ ಮೂಲಕ ಅಲ್ಲಿಂದಲೂ ಅವರನ್ನು ಸಾಗಹಾಕಿದ್ದಾರೆ. ಅಲ್ಲಿಂದ ಮತ್ತೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆರಂಭದಲ್ಲೇ ಮಗುವಿಗೆ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದರಿಂದಲೇ ಮಗು ಸತ್ತಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಇದ್ದೊಬ್ಬ ಮಗಳನ್ನೂ ಕಳೆದುಕೊಂಡೆವು ಎಂದು ಮೃತ ಮಗುವಿನ ಪಾಲಕರ ದುಃಖ ಮುಗಿಲು ಮುಟ್ಟಿದೆ.