ರಾಮ ಮಂದಿರಕ್ಕೆ ಶಿಲಾನ್ಯಾಸವನ್ನು ರಾಜೀವ್ ಗಾಂಧಿ ಮಾಡಿದ್ದಾರೆ - ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ವಿವಾದಿತ ಹೇಳಿಕೆ | Janata news
ನವದೆಹಲಿ : ರಾಮ ಮಂದಿರದ ಶಿಲಾನ್ಯಾಸ ಈಗಾಗಲೇ ಆಗಿದೆ, ರಾಜೀವ್ ಗಾಂಧಿ ದೇವಾಲಯದ ಅಡಿಪಾಯ ಹಾಕಿದ್ದಾರೆ, ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಮತ್ತೊಮ್ಮೆ ರಾಮ ಮಂದಿರದ ಶಿಲಾನ್ಯಾಸದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನೂರಾರು ವರ್ಷಗಳಿಂದ ರಾಮ ದೇವಾಲಯದ ವಿವಾದಕ್ಕೆ ರಾಜಕೀಯ ರೂಪ ನೀಡಿದ್ದಕ್ಕೆ ನಮಗೆ ಬೇಸರವಾಗಿದೆ, ಎಂದು ಹೇಳಿದ್ದಾರೆ. ನಾನು ಶಂಕರಾಚಾರ್ಯರೊಂದಿಗೆ ಮಾತನಾಡಿದ್ದೇನೆ, ಪ್ರತಿ ಶುಭ ಕಾರ್ಯಗಳಿಗೆ ಮುಹೂರ್ತವನ್ನು ನೋಡಲಾಗುತ್ತದೆ, ಆದರೆ ಚತುರ್ಮಾಸದಲ್ಲಿ ಯಾವುದೇ ಶುಭ ಕಾರ್ಯಗಳಿಲ್ಲ, ಆದರೂ ರಾಮ ಮಂದಿರದ ಭೂಮಿ ಪೂಜೆ ಏಕೆ? ಎಂದು ಕಾಂಗ್ರೆಸ್ ಮುಖಂಡ ಪ್ರಶ್ನಿಸಿದ್ದಾರೆ.
ಇಂದು ಮಾದ್ಯಮದೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್ ಅವರು ರಾಮ್ ದೇವಾಲಯದ ಭೂಮಿ ಪೂಜನ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಇದು ಮುಹೂರ್ತ ಸರಿಯೇ? ಎಂದು ಬಿಜೆಪಿಯನ್ನು ಕೇಳಿದರು.
ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಇದೆ, ಇದಕ್ಕಾಗಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ರಾಮ ದೇವಾಲಯದ ವಿಷಯಕ್ಕೆ ರಾಜಕೀಯ ರೂಪ ನೀಡಲಾಗಿದೆ, ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾನ್, ಯುಪಿ ಮಂತ್ರಿಗಳು, ವಿ.ಡಿ.ಶರ್ಮಾ, ಯಡಿಯೂರಪ್ಪ ಮತ್ತು ರಾಮ ದೇವಾಲಯದ ಪುರೋಹಿತರಿಗೆ ಸಾಂಕ್ರಾಮಿಕ ರೋಗ ಬಂದಿರುವುದು ತುಂಬಾ ಆತಂಕಕಾರಿಯಾಗಿದೆ. ಮೋದಿ ಮತ್ತು ಯೋಗಿಯ ಸಂಪೂರ್ಣ ಕ್ಯಾಬಿನೆಟ್ ಅನ್ನು ಕ್ವಾರನ್ಟೈನ್ ಮಾಡಬೇಕಿತ್ತು. ಸಾಮಾನ್ಯ ಜನರಿಗೆ ಪ್ರತ್ಯೇಕ ಕಾನೂನು ಇದೆ ಮತ್ತು ಬಿಜೆಪಿ ಮುಖಂಡರಿಗೆ ವಿಭಿನ್ನವಾಗಿದೆ, ಎಂದು ಸಿಂಗ್ ಆರೋಪಿಸಿದ್ದಾರೆ.