ಇಂದು ಉಡುಪಿ ಶ್ರೀಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿಲ್ಲ ಏಕೆ? | Janata news
ಉಡುಪಿ: : ಶ್ರೀಕೃಷ್ಣ ಮಠದಲ್ಲಿ ಇಂದು ಅಷ್ಟಮಿ ಆಚರಣೆ ನಡೆಯುತ್ತಿಲ್ಲ. ಸೆಪ್ಟೆಂಬರ್ 11ಕ್ಕೆ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲು ಉಡುಪಿ ಕೃಷ್ಣಮಠ ತೀರ್ಮಾನಿಸಿದೆ.
ಈ ಬಾರಿ ಎರಡು ಜನ್ಮಾಷ್ಟಮಿ ಇದ್ದು, ಆ.11ರಂದು ಚಂದ್ರಮಾನ, ಸೆ.10ರಂದು ಸೌರಮಾನ ಇದೆ. ಉಡುಪಿಯಲ್ಲಿ ಸೌರಮಾನ ಪಂಚಾಂಗ ಅನುಸರಣೆ ಮಾಡಲಾಗುತ್ತಿದ್ದು, ಶ್ರೀಕೃಷ್ಣ ಹುಟ್ಟಿದ್ದು, ಸಿಂಹಮಾಸ ಕೃಷ್ಣ ಪಕ್ಷ ರೋಹಿಣಿ ನಕ್ಷತ್ರ ಮೂಡುವ ಚಂದ್ರ ಉದಯದ ಕಾಲದಲ್ಲಿ. ಈ ತಿಂಗಳಲ್ಲಿ ನಾಳೆ ತಾರಾನುಕೂಲ ಇಲ್ಲದ ಕಾರಣ ಉಡುಪಿಯಲ್ಲಿ ಅಷ್ಟಮಿ ಆಚರಣೆ ನಡೆಸುತ್ತಿಲ್ಲ. ಶ್ರೀಕೃಷ್ಣ ಮಠದಲ್ಲಿ ಸೆ.10ರಂದು ಜನ್ಮಾಷ್ಟಮಿ ಆಚರಿಸುವುದಾಗಿ ಮಠದ ಮೂಲಗಳು ತಿಳಿಸಿವೆ.
ಸೆ.10ರ ಮಧ್ಯರಾತ್ರಿ 12.15ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಮರುದಿನ ಶ್ರೀಕೃಷ್ಣ ಲೀಲೋತ್ಸವ ನೆರವೇರಲಿದೆ. ಕೋವಿಡ್ ಹಿನ್ನೆಲೆ ಕೃಷ್ಣಮಠವು ಭಕ್ತರಿಗೆ ತೆರೆದಿಲ್ಲ ಎಂದು ತಿಳಿಸಿದ್ದಾರೆ.