ಎಸ್ಡಿಪಿಐ ಮತ್ತು ಪಿಎಫ್ಐ ನಿಷೇಧಿಸಲು ಸಂಸದೆ ಶೋಭಾ ಕರಂದ್ಲಾಜೆ ಕರೆ | Janata news
ಬೆಂಗಳೂರು : ಎಸ್ಡಿಪಿಐ ಮತ್ತು ಪಿಎಫ್ಐ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಬಿಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಶಿಫಾರಸು ಮಾಡುವ ಕುರಿತು ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ.
ಎಸ್ಡಿಪಿಐ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ನ ಹೊಸ ಮುಖವಾಗಿದೆ, ಎಂದಿರುವ ಅವರು, ಸಾಮಾಜಿಕ ಸಾಮರಸ್ಯವನ್ನು ಕಲಕುವ ಅನೇಕ ಕೊಲೆಗಳು ಮತ್ತು ಘಟನೆಗಳಲ್ಲಿ ಎಸ್ಡಿಪಿಐ ಭಾಗಿಯಾಗಿರುವುದು ಕೇಂದ್ರ ಏಜೆನ್ಸಿಗಳಿಂದ ಸಾಬೀತಾಗಿದೆ, ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆಯನ್ನು ಉಲ್ಲೇಖಿಸಿರುವ ಅವರು, ಈ ಪ್ರಕರಣದಲ್ಲಿ ಎಸ್ಡಿಪಿಐ ಸಂಪರ್ಕವನ್ನು ಸಿಬಿಐ ಕಂಡುಕೊಂಡಿದೆ, ಎಂದಿದ್ದಾರೆ.
ಆರೋಪಿತ ಎಸ್ಡಿಪಿಐನ ಕೈವಾಡ ಇರುವ ಘಟನೆಗಳ ಪಟ್ಟಿ ಮಾಡಿರುವ ಶೋಭಾ ಅವರು,
1. ಮಂಗಳೂರು ಪೊಲೀಸರ ಮೇಲೆ ದಾಳಿ.
2. ಶಾಸಕ ತನ್ವೀರ್ ಸೈತ್ ಅವರ ಕೊಲೆ ಯತ್ನ.
3. ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ.
4. ಕೆ.ಜಿ.ಹಳ್ಳಿ ಮತ್ತು ಡಿಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದು.
5. ಶ್ರೀಂಗೇರಿಯಲ್ಲಿರುವ ಶ್ರೀ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್ಡಿಪಿಐ ಧ್ವಜವನ್ನು ಇಡುವುದು ಮತ್ತು ಹಿಂಸಾಚಾರವನ್ನು ಪ್ರಚೋದಿಸುವುದು.
ಈ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸಲು ಶ್ರೀ ಬಿಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರವನ್ನು ಶಿಫಾರಸು ಮಾಡುವ ಸಮಯ ಬಂದಿದೆ, ಎಂದು ಕರೆ ನೀಡಿದ್ದಾರೆ.
ಎಸ್ಡಿಪಿಐ ಮತ್ತು ಪಿಎಫ್ಐನಂತಹ ಸಂಘಟನೆಗಳು ಮಾನವಕುಲಕ್ಕೆ, ರಾಷ್ಟ್ರೀಯ ಭದ್ರತೆಗೆ ಮತ್ತು ಸಾಮರಸ್ಯದ ಸಮಾಜಕ್ಕೆ ಅಪಾಯಕರವಾಗಿದೆ, ಎಂದು ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
SDPI is the new face of banned terror org SIMI & Indian Mujahideen.
— Shobha Karandlaje (@ShobhaBJP) August 14, 2020
It has been proved by the central agencies of SDPI's involvement in many murders & incidents that stirred social harmony.
Even in the murder of RSS karyakarta Sri Rudresh in Bengaluru, CBI found SDPI link.
1/3 pic.twitter.com/MAt76wBxo2