ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿಧಾಯ ಹೇಳಿದ ಧೋನಿ | Janata news
ನವದೆಹಲಿ : ಭಾರತದ ಕ್ರಿಕೆಟರಂಗ ಕಂಡ ಅತಿದೊಡ್ಡ ಕ್ರೀಡಾಪಟುಗಳಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರು ಇಂದು ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಮರಳುವ ಅಭಿಮಾನಿಗಳ ಆಸೆಗೆ ತೆರೆ ಎಳೆದಿದ್ದಾರೆ. ನಿಗದಿತ ಓವರ್ಗಳ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಅವರ ನಿರ್ಧಾರವು ಸುಮಾರು 16 ವರ್ಷಗಳ ಅವರ ಸುವರ್ಣ ಆಟವನ್ನು ಕೊನೆಗೊಳಿಸಿದೆ.
ಧೋನಿ ತಮ್ಮ ನಿರ್ಧಾರ ಪ್ರಕಟಿಸುತ್ತಿದ್ದಂತೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿವೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಮಾತಾಡಿ, ಅದು ಒಂದು ಯುಗದ ಅಂತ್ಯ. ಅವರು(ಎಂ.ಎಸ್. ಧೋನಿ) ದೇಶ ಮತ್ತು ವಿಶ್ವ ಕ್ರಿಕೆಟ್ಗೆ ಅಂತಹ ಆಟಗಾರರಾಗಿದ್ದಾರೆ. ಅವರ ನಾಯಕತ್ವದ ಗುಣಗಳು ಅದ್ಭುತ ಆಗಿವೆ, ಇದು ಹೊಂದಿಸಲು ಕಷ್ಟವಾಗುತ್ತದೆ, ವಿಶೇಷವಾಗಿ ಕಡಿಮೆ ಓವರ್ ಗಳ ಆಟಗಳಲ್ಲಿ, ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಐಸಿಸಿ ಏಕದಿನ ವಿಶ್ವಕಪ್ ನಂತರ ಮಾಜಿ ನಾಯಕ ಆಟದಿಂದ ವಿರಾಮ ತೆಗೆದುಕೊಂಡ ನಂತರ ಮತ್ತು ಭಾರತೀಯ ಸೇನೆಯ ರೆಜಿಮೆಂಟ್ ಅನ್ನು ಅಲ್ಪಾವಧಿಗೆ ಸೇರಿಕೊಂಡ ದೋನಿ ಕುರಿತು ಉಹಾಪೋಹಗಳು ತೀವ್ರಗೊಂಡಿದ್ದವು. ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿದ್ದ ಧೋನಿ ತಂಡಕ್ಕೆ ಮರಳುವ ಕುರಿತು ನಿರೀಕ್ಷೆ ಹೆಚ್ಚುತ್ತಿರುವ ಬೆನ್ನಲ್ಲೇ ಧೋನಿ ತಮ್ಮ ನಿವೃತ್ತಿ ಘೋಷಿಸಿದ್ದಾರೆ.
ಧೋನಿ 2014ರ ಡಿಸೆಂಬರ್ನಲ್ಲಿ ಟೆಸ್ಟ್ ಕ್ರಿಕೆಟ್ನಿಂದ ಹೊರಬಂದಿದ್ದರು ಮತ್ತು ಸ್ಫೋಟಕ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಯಾವಾಗ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ನ ಸೀಮಿತ ಓವರ್ಗಳ ಆಟವನ್ನು ಸ್ಥಗಿತಗೊಳಿಸುತ್ತಾರೆ ಎಂಬ ಬಗ್ಗೆ ತೀವ್ರ ಊಹಾಪೋಹಗಳು ಕೇಳಿಬಂದವು.