ಆ.20ಕ್ಕೆ ಸಿಇಟಿ ಫಲಿತಾಂಶ ಪ್ರಕಟ: ಡಿಸಿಎಂ ಅಶ್ವತ್ಥ ನಾರಾಯಣ | Janata news
ಬೆಂಗಳೂರು : ವೃತ್ತಿ ಶಿಕ್ಷಣ ಕೋರ್ಸ್ ಗಳಿಗಾಗಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದಿದ್ದಂತ ಸಿಇಟಿ-2020ರ ಫಲಿತಾಶಂ ಆಗಸ್ಟ್ 20ರಂದು ಪ್ರಕಟಗೊಳ್ಳಲಿದೆ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಆಗಸ್ಟ್ 20ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಘೋಷಿಸಿದ್ದಾರೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಸೀಟುಗಳ ಶುಲ್ಕ ಏರಿಕೆ ಇರುವುದಿಲ್ಲ. ಸೀಟು ಹಂಚಿಕೆ ಸಹ ಕಳೆದ ಸಾಲಿನಲ್ಲಿರುವಂತೆಯೇ ಮುಂದುವರಿಯಲಿದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ವರ್ಷ ಶೇ.33ರಷ್ಟು ಶುಲ್ಕ ಏರಿಕೆ ಮಾಡಲಾಗಿತ್ತು, ಈ ಸಾಲಿನಲ್ಲಿ ಯಾವ ಶುಲ್ಕ ಏರಿಕೆಯಾಗಲಿ, ಸೀಟು ಹಂಚಿಕೆಯಲ್ಲಿ ವ್ಯತ್ಯಾಸವಾಗಲಿ ಇಲ್ಲ ಎಂದು ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಇಂಜಿನಿಯರಿಂಗ್ ಸೀಟ್ಗಳಿಗೆ ಎರಡು ಸ್ಲ್ಯಾಬ್ನಲ್ಲಿ(ರೂ.65,340 ಮತ್ತು ರೂ. 58,806) ಸರ್ಕಾರಿ ಶುಲ್ಕ ಇರಲಿದೆ. ಕಾಮೆಡ್-ಕೆ ಸೀಟುಗಳ ಶುಲ್ಕವೂ ಎರಡು ಸ್ಲ್ಯಾಬ್(ರೂ.1,43748 ಮತ್ತು ರೂ.2,01,960)ನಲ್ಲಿರಲಿದೆ ಎಂದರು.
ಮೆಡಿಕಲ್ ಕೌನ್ಸೆಲಿಂಗ್ನ್ನು ಮೊದಲೇ ಮುಗಿಸುತ್ತೇವೆ, ಎರಡೇ ರೌಂಡ್ ಕೌನ್ಸೆಲಿಂಗ್ ಮಾಡೋಕೆ ಅವಕಾಶವಿದೆ. ಈ ಮೂಲಕ ಸೀಟು ವರ್ಗಾವಣೆ ಮಾಡಿಕೊಡುತ್ತೇವೆ. ಅಕ್ಟೋಬರ್ನಲ್ಲಿ ಸಿಇಟಿ ಕೌನ್ಸೆಲಿಂಗ್ ನಡೆಯಲಿದೆ, ಎಐಸಿಟಿಯಿಂದ ನಮಗೆ ಸೂಚನೆ ಬಂದಿದೆ. ಹೀಗಾಗಿ ಅನ್ಲೈನ್ ಕೌನ್ಸೆಲಿಂಗ್ ಮುಂದುವರಿಯಲಿದೆ ಎಂದರು.