ಪತ್ನಿ ಸಾವಿಗೆ ಮನನೊಂದು, ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪತಿ! | Janata news
ಬಳ್ಳಾರಿ : ಅನಾರೋಗ್ಯಕ್ಕೆ ತುತ್ತಾಗಿ ಪತ್ನಿ ಸಾವನ್ನಪ್ಪಿದ್ದಕ್ಕೆ ಮನ ನೊಂದು ಪತಿ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲವೆಗೆ ಹಾರಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹೊರವಲಯದ ಮುಂಡರಗಿಯ HLC ಕಾಲುವೆಯಲ್ಲಿ ಈ ಘಟನೆ ಸಂಭವಿಸಿದ್ದು, ತನ್ನಿಬ್ಬರು ಮಕ್ಕಳಾದ ಸ್ಪೂರ್ತಿ(12) ಕೀರ್ತನಾ(15) ರೊಂದಿಗೆ ಗಣೇಶ್ ಅಚಾರಿ ಕಾಲುವೆಗೆ ಹಾರಿದ್ದಾರೆ.
ಗಣೇಶ್ ಅಚಾರಿ ಅವರ ಪತ್ನಿ 15 ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದರಿಂದ ಮನನೊಂದಿದ್ದ ಗಣೇಶ್ ಆಚಾರಿ ಅರು ತಮ್ಮಿಬ್ಬರು ಮಕ್ಕಳಾದ ಸ್ಪೂರ್ತಿ(12) ಕೀರ್ತನಾ(15) ರೊಂದಿಗೆ ಕಾಲುವೆಗೆ ಹಾರಿದ್ದಾರೆ.
ಬೆಂಗಳೂರು ರಸ್ತೆಯಲ್ಲಿರುವ ಖಬರ್ಸ್ತಾನ್ ಎದುರಿನ ಪೆಟ್ರೋಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಆಚಾರಿ ತನ್ನಿಬ್ಬರು ಮಕ್ಕಳೊಂದಿಗೆ ಇಲ್ಲಿನ ಹೆಚ್ಎಲ್ಸಿ ಉಪ ಕಾಲುವೆಗೆ ಹಾರಿದ್ದಾರೆ.
ಘಟನೆಯಲ್ಲಿ 12 ವರ್ಷದ ಪುತ್ರಿ ಸ್ಫೂರ್ತಿ ಹಾಗೂ ತಂದೆ ಗಣೇಶ್ ಜಲಸಮಾಧಿಯಾದರೆ, ಇನ್ನೊಬ್ಬ ಮಗಳನ್ನು ಗೃಹರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪುತ್ರಿ ಸ್ಫೂರ್ತಿ ಮೃತದೇಹ ಪತ್ತೆಯಾಗಿದ್ದು, ಗಣೇಶ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.