ಮತ್ತೊಬ್ಬರ ಹೆಂಡ್ತಿ ಜೊತೆ ಮೂರನೇ ಬಾರಿ ಓಡಿ ಹೋದ ಕಾನ್ಸ್ಟೇಬಲ್! | Janata news
ಮಂಡ್ಯ : ಜಿಲ್ಲೆಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೇದೆ ಹರೀಶ್ ವಿರುದ್ಧ ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ತನ್ನೊಂದಿಗೆ ಕರೆದೊಯ್ದಿರುವ ಆರೋಪ ಕೇಳಿಬಂದಿದೆ.
ಹಲಗೂರು ಪೊಲೀಸ್ ಠಾಣೆಯ ಪೇದೆ ಹರೀಶ್ ವಿರುದ್ದ ಪ್ರಕರಣ ದಾಖಲಾಗಿದೆ. ಪತ್ನಿ ಕಳೆದುಕೊಂಡ ಕೊಳ್ಳೆಗಾಲ ತಾಲೂಕಿನ ಮಳ್ಳೂರು ಗ್ರಾಮದ ಸಂತ್ರಸ್ತ ಪತಿ ನಾಗರಾಜು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮುಳ್ಳೂರು ನಿವಾಸಿ ನಾಗರಾಜಪ್ಪ ಕೊಳ್ಳೇಗಾಲ ಪಟ್ಟಣದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮಕ್ಕಳೊಂದಿಗೆ ವಾಸವಾಗಿದ್ದ. ಆದರೆ ಈತನ ಹೆಂಡತಿ ಜೊತೆ ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಸಂಬಂಧ ಇಟ್ಟುಕೊಂಡಿದ್ದನು. ಹರೀಶ್ ಕೊಳ್ಳೇಗಾಲ ಮೂಲದವನಾಗಿದ್ದು, ಈ ಹಿಂದೆ ಕೊಳ್ಳೇಗಾಲದಲ್ಲಿ ಕೆಲಸ ಮಾಡುತ್ತಿದ್ದನು.. ಈ ವೇಳೆ ನಾಗರಾಜಪ್ಪನ ಎಂಬವರ ಪತ್ನಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ಈತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ.
ಮನೆ ಮಂದಿಗೆಲ್ಲಾ ವಿಷಯ ಗೊತ್ತಾಗಿ ರಾಡಿ ರಂಪಾಟವಾಗಿತ್ತು. ಹೀಗಾಗಿ ಕಾನ್ಸ್ಟೇಬಲ್ ಹರೀಶ್ ಹಾಗೂ ನಾಗರಾಜಪ್ಪನ ಪತ್ನಿ ಈ ಹಿಂದೆ ಎರಡು ಬಾರಿ ಓಡಿ ಹೋಗಿದ್ದರು. ಬಳಿಕ ರಾಜಿ ಪಂಚಾಯತಿ ನಡೆಸಿ ಅವರವರ ಮನೆ ಸೇರಿಸಲಾಗಿತ್ತು. ಬಳಿಕ ಹರೀಶ ಮಂಡ್ಯದ ಹಲಗೂರು ಠಾಣೆಗೆ ವರ್ಗಾವಣೆಯಾಗಿದ್ದ, ಹಾಗಿದ್ದರೂ ಅಕ್ರಮ ಸಂಬಂಧ ಕೊಂಡಿದ್ದ ಎನ್ನಲಾಗಿತ್ತು.
ಇದೀಗ ಮತ್ತೆ ಇಬ್ಬರೂ ಮತ್ತೆ ಓಡಿ ಹೋಗಿದ್ದಾರೆ. ಹೀಗಾಗಿ ನೊಂದಿರುವ ನಾಗರಾಜಪ್ಪ ದೂರು ನೀಡಿದ್ದು, ಬ್ಲಾಕ್ಮೇಲ್ ಮಾಡಿ ಬಲವಂತವಾಗಿ ತನ್ನೊಂದಿಗೆ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ನಾಗರಾಜು, ಪೇದೆಯಿಂದ ತನ್ನ ಹೆಂಡತಿಯನ್ನ ಬಿಡಿಸಿಕೊಡುವಂತೆ ಮಂಡ್ಯ ಎಸ್ಪಿಗೆ ಮನವಿ ಮಾಡಿದ್ದಾರೆ.