ರಾಯಚೂರಲ್ಲಿ ನೀರಲ್ಲಿ ಮುಳುಗಿ 2 ಮಕ್ಕಳು ಸೇರಿ ಮೂವರು ಸಾವು, ಇನ್ನೊಬ್ಬರಿಗಾಗಿ ಹುಡುಕಾಟ! | Janata news
ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನೀರಿನಲ್ಲಿ ಮುಳುಗಿ ಮೂರು ಜನ ಸಾವನ್ನಪ್ಪಿದರೆ ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.
1) ಲಿಂಗಸಗೂರು ತಾಲ್ಲೂಕಿನ ಕೋಥಾ ಗ್ರಾಮದಲ್ಲಿ ಇಬ್ಬರು ಮಕ್ಕಳು ಮತ್ತು ತಾಯಿ ಸೇರಿದಂತೆ ಕುಟುಂಬದ ಮೂವರು ಸಣ್ಣ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶನಿವಾರ ಸಂಜೆ ಬಟ್ಟೆ ಒಗೆಯಲು ಅವರು ಹೊಂಡಕ್ಕೆ ಹೋಗಿದ್ದಾಗ, ಈ ಸಂದರ್ಭದಲ್ಲಿ ಮಕ್ಕಳು ಕಾಲು ಜಾರಿ ಬಿದ್ದಿದ್ದು, ಮಕ್ಕಳನ್ನು ರಕ್ಷಿಸಲು ಹೋಗಿ ತಾನೂ ಕಾಲು ಬಿದ್ದ, ದುರ್ಘಟನೆ ನಡೆದಿದ್ದು, ಭಾನುವಾರ ಬೆಳಿಗ್ಗೆ ಮೃತ ದೇಹಗಳನ್ನು ಹೊಂಡದಿಂದ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ಮೃತರನ್ನು ಕೋಥ ಗ್ರಾಮದ ತಾಯಿ ಪಾರ್ವತಿ (30), ಮಕ್ಕಳಾದ ಅರ್ಜುನ್ (10) ಮತ್ತು ಶಿಲ್ಪಾ (8) ಎಂದು ಗುರುತಿಸಲಾಗಿದೆ.
2) ಮತ್ತೊಂದೆಡೆ ತುಂಗಭದ್ರಾ ನದಿಯಲ್ಲಿ ಯುವಕ ನಾಪತ್ತೆಯಾದ ಘಟನೆ ನಡೆದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಹರನಹಳ್ಳಿ ಬಳಿಯ ಶಾಸ್ತ್ರಿ ಕ್ಯಾಂಪಿನ ಸಂದೀಪ್ ಕುಮಾರ್ (24) ಎಂಬಾತ ನಾಪತ್ತೆಯಾಗಿದ್ದಾನೆ. ಯುವಕನ ಬಟ್ಟೆ ಮತ್ತು ಚಪ್ಪಲಿ ನದಿ ದಂಡೆಯಲ್ಲೇ ಇದ್ದು, ಯುವಕನಿಗಾಗಿ ಸ್ಥಳೀಯರು ನದಿ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.
ಅಗ್ನಿ ಶಾಮಕ ದಳದೊಂದಿಗೆ ತುಂಗಭದ್ರಾ ನದಿಯಲ್ಲಿ ಶೋಧ ಕಾರ್ಯ ನಡೆದಿದೆ. ಮಾನವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.