ಜಮೀನಿನಲ್ಲಿಯೇ ನವಜಾತ ಶಿಶು ಎಸೆದು ಹೋದ ನಿರ್ದಯಿ ತಾಯಿ! ಎಲ್ಲಿ ? | Janata news
ರಾಯಚೂರು: : ನಿರ್ದಯಿ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಜಮೀನಿನಲ್ಲಿ ಎಸೆದುಹೋಗಿರುವಂತಹ ಹೇಯ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗ್ರಾಮವೊಂದರ ಬಳಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಬೆಂಡೋನಿ ಗ್ರಾಮದಲ್ಲಿ ಕಳೆದ ಒಂದೇ ಒಂದು ದಿನದ ಹಿಂದಷ್ಟೇ ಜನಿಸಿದ ನವಜಾತ ಹೆಣ್ಣಮಗುವನ್ನು ನಿರ್ದಯಿ ತಾಯಿಯೊಬ್ಬಳು ಜಮೀನಿನಲ್ಲಿಯೇ ಬಿಸಾಡಿ ಹೋಗಿರುವುದು ಪತ್ತೆಯಾಗಿದೆ.
ಜಮೀನಿನಲ್ಲಿ ಮಗು ಅಳುತ್ತಿದ್ದನ್ನು ಕೇಳಿದಂತ ದಾರಿಹೋಕರೊಬ್ಬರು ಹತ್ತಿರ ಬಂದು ನೋಡಿದಾಗ ನವಜಾತ ಹೆಣ್ಣುಮಗು ಕಂಡು ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಾಗ, ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ಮಗುವನ್ನು ರಕ್ಷಿಸಿದ್ದಾರೆ.
English summary :Rayachuru