ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಗೆ ಶುಭಕೋರಿದ ಪ್ರಧಾನಿ ಮೋದಿ : ಮರೆತರಾ ಸಿಎಂ ಯಡಿಯೂರಪ್ಪ? | Janata news
ನವದೆಹಲಿ : ಮಾನವ ಕುಲವೆಲ್ಲಾ ಒಂದೇ ಎಂಬ ಘೋಷಣೆಯನ್ನು, ಆಚರಣೆಗೆ ತರಲು ಶ್ರಮಿಸಿದ ವಿಶ್ವಮಾನವ ಹಾಗೂ ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿಯವರು ನಮನ ಸಲ್ಲಿಸಿ, ಶುಭಕೋರಿದ್ದಾರೆ.
ಪೂಜ್ಯ ಶ್ರೀ ನಾರಾಯಣ ಗುರುಗಳಿಗೆ ಅವರ ಜಯಂತಿಯಂದು ನಮಸ್ಕರಿಸುತ್ತೇನೆ. ಅವರ ಜೀವನ ಮತ್ತು ಕೃತಿಗಳು ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸುಧಾರಣೆಯ ಪರಿಪೂರ್ಣ ಮಿಶ್ರಣವನ್ನು ನಿರೂಪಿಸುತ್ತವೆ.
ಅವರು ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣಕ್ಕೆ ಒತ್ತು ನೀಡಿದರು. ಅವರು ದೂರದೃಷ್ಟಿಯ ಚಿಂತಕರಾಗಿದ್ದರು, ಅವರ ಆದರ್ಶಗಳು ಭಾರತದಾದ್ಯಂತ ಅನೇಕರಿಗೆ ಶಕ್ತಿ ನೀಡುತ್ತದೆ, ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಧಾರ್ಮಿಕ ಸುಧಾರಣೆಯ ಮೂಲಕ ಅಸ್ಪೃಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಸಮರ ಸಾರಿ ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಸಂತ ನಾರಾಯಣ ಗುರುಗಳ ಚಿಂತನೆ ನಮ್ಮ ಮುನ್ನಡೆಯ ದಾರಿಗೆ ಬೆಳಕಾಗಲಿ, ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು, ಬಹುಶಃ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮರೆತಂತೆ ಕಂಡು ಬಂದಿರುವುದು ವಿಪರ್ಯಾಸ.