ಅಕ್ರಮ ಮರಳು ಸಾಗಾಣಿಕೆಗೆ ಸಹಕಾರ: ಡಿವೈಎಸ್ಪಿ ಮೋಹನ್ ಅಮಾನತು! | Janata news
ಚಾಮರಾಜನಗರ: : ಅಕ್ರಮ ಮರಳು ಸಾಗಾಣಿಕೆಗೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ Dy SP ಜೆ. ಮೋಹನ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.
ಕಳೆದ ಮೇ 15ರ ಮಧ್ಯರಾತ್ರಿ, ನಗರದ ಸಂತೆಮರಹಳ್ಳಿ ರಸ್ತೆಯಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ಗೆ ಲಾರಿ ಡಿಕ್ಕಿಯಾಗಿ ಕ್ಲೀನರ್ ಮೃತಪಟ್ಟಿದ್ದ. ಚಾಮರಾಜನಗರ ಡಿವೈಎಸ್ಪಿ ಜೆ. ಮೋಹನ್, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ. ಮಂಜು ಹಾಗೂ ಪೂರ್ವ ಠಾಣೆ ಎಸ್ಐ ಸುನೀಲ್ ಅಕ್ರಮ ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಟ್ಟಿದ್ದರು.
ಈ ವೇಳೆ ಅದರಲ್ಲಿ ಮರಳು ಬದಲಾಗಿ M-ಸ್ಯಾಂಡ್ ಸಾಗಿಸಲಾಗುತ್ತಿತ್ತು ಎಂದು ಬಿಂಬಿಸಲಾಗಿತ್ತು. ಹೀಗಾಗಿ, ಅಕ್ರಮ ಮರಳು ಸಾಗಾಣಿಕೆಗೆ ಸಹಕರಿಸಲು ಪ್ರಕರಣ ತಿರುಚಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬಂದಿತ್ತು.
ದಕ್ಷಿಣ ವಲಯ ಐಜಿಪಿ ಅವರು ಈ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ಎಎಸ್ಪಿಯವರ ತನಿಖಾ ವರದಿಯಲ್ಲಿ ಪ್ರಕರಣ ನಡೆದಿರುವುದು ದೃಢಪಟ್ಟು, ಕರ್ತವ್ಯ ಲೋಪ ಎಸಗಿದ ಕಾರಣ ಡಿವೈಎಸ್ಪಿ ಅವರನ್ನು ಅಮಾನತುಪಡಿಸಲಾಗಿದೆ.
ಡಿವೈಎಸ್ಪಿ ಜೆ ಮೋಹನ್ ಅವರನ್ನು ಕೆ.ಎಸ್.ಪಿ.( (ಡಿಪಿ) ನಿಯಮಗಳ 1965/89ರ ನಿಯಮ 5ರ ಅನ್ವಯ ಶಿಸ್ತು ಕ್ರಮ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಪಡಿಸಿ ಸರ್ಕಾರದ ಒಳಾಡಳಿತ ಇಲಾಖೆಯ (ಪೊಲೀಸ್ ಸೇವೆಗಳು) ಅಧೀನ ಕಾರ್ಯದರ್ಶಿ ಬಿ.ಕೆ ಭುವನೇಂದ್ರಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಚಾಮರಾಜನಗರ ಗ್ರಾಮಾಂತರ CI ಮಂಜು, SI ಸುನಿಲ್, ಹಾಗೂ ಮುಖ್ಯಪೇದೆ ನಾಗನಾಯಕ ಅಮಾನತುಗೊಂಡಿದ್ದಾರೆ.