ಮೈಸೂರಿನಲ್ಲೊಂದು ಅಮಾನವೀಯ ಘಟನೆ: ಮೊದಲ ಪತಿಯ ಮೇಲಿನ ದ್ವೇಷಕ್ಕೆ, ಹೆತ್ತ ಮಗಳನ್ನೇ ಕೊಲೆಗೈದ ತಾಯಿ! | Janata news
ಮೈಸೂರು : ಮೊದಲ ಪತಿಯ ಮೇಲಿನ ದ್ವೇಷಕ್ಕೆ, ಎರಡನೇ ಗಂಡ ಹಾಗೂ ಅತ್ತೆ ಜತೆ ಸೇರಿಕೊಂಡು ಮಹಿಳೆಯೊಬ್ಬಳು ಹೆತ್ತ ಮಗುವನ್ನೇ ಕೊಲೆಗೈದಿರುವ ಅಮಾನವೀಯ ಘಟನೆ ಮೈಸೂರಿನ ಮೇಟಗಳ್ಳಿಯಲ್ಲಿ ನಡೆದಿದೆ.
ಬಾಲಕಿ ಹೆಸರು ಜಯಲಕ್ಷ್ಮಿ, 23 ವರ್ಷದ ತಾಯಿ ಪವಿತ್ರಾ, 55 ವರ್ಷದ ಅಜ್ಜಿ ಗೌರಮ್ಮ, 23 ವರ್ಷದ ಸೂರ್ಯ ಅಲಿಯಾಸ್ ಪಾಪು ಕೊಲೆ ಮಾಡಿದವರು.
ಪವಿತ್ರಾ ಹಾಗೂ ಸಿದ್ದೇಶ ಎಂಬವರಿಗೆ 8 ವರ್ಷಗಳ ಹಿಂದೆ ಮದುವೆಯಾಗಿತ್ತು. ಗಂಡ ಬದುಕಿರುವಾಗಲೇ ಪವಿತ್ರಾ ಸೂರ್ಯನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ನಂತರ ಮೊದಲ ಗಂಡನನ್ನ ಬಿಟ್ಟ ಪವಿತ್ರ ಸೂರ್ಯನೊಂದಿಗೆ ಮದುವೆಯಾದಳು, ಇದಾದ ನಂತರ ಪವಿತ್ರಳಿಗೆ ಎರಡನೆ ಗಂಡನಿಗು ಹೆಣ್ಣುಮಗು ಜನಿಸಿತು.
ಇದೇ ಕಾರಣಕ್ಕೆ ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದಳು. ಆಗಸ್ಟ್ 25ರಂದು ಬೆಳಿಗ್ಗೆ 5.30ರ ಸಮಯದಲ್ಲಿ ಮಲಗಿದ್ದ ಮಗಳ ಕೈಗಳನ್ನು ತಾಯಿ ಪವಿತ್ರಾ ಕಾಲುಗಳನ್ನು ಅಜ್ಜಿ ಗೌರಮ್ಮ ಹಿಡಿದುಕೊಳ್ಳುತ್ತಾರೆ. ದಿಂಬನ್ನು ಮೂಗು ಮತ್ತು ಬಾಯಿಗೆ ಹಿಡಿದು ಉಸಿರುಗಟ್ಟಿಸಿ, ಕುತ್ತಿಗೆ ಹಿಸುಕಿ ಮಲತಂದೆ ಸೂರ್ಯ ಕೊಲೆ ಮಾಡುತ್ತಾನೆ. ನಂತರ, ಅನಾರೋಗ್ಯದಿಂದ ಮೃತಪಟ್ಟಳು ಎಂದು ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.
ಬಳಿಕ ಅನುಮಾನ ಬಾರದಂತೆ ಬಾಲಕಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಬಾಲಕಿ ಜಯಲಕ್ಷ್ಮಿ ತಂದೆ ಸಿದ್ದೇಶ್ಗೆ ಅನುಮಾನ ಹೆಚ್ಚಾದಾಗ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು.. ಹೀಗಾಗಿ ಮೇಟಗಳ್ಳಿ ಪೊಲೀಸರು ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜಾಂಶವನ್ನು ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.