62 ದಿನಗಳ ಬಳಿಕ ಹೊರಬಂದ ಸ್ವಾಮೀಜಿ, ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತರ ದಂಡು! | Janata news
ಹಾವೇರಿ: : ಗುಹೆಯಲ್ಲಿ ಸಿದ್ಧಿ ಸಮಾಧಿ ಅನುಷ್ಠಾನಕ್ಕೆ ಕುಳಿತ್ತಿದ್ದ ಸವಣೂರು ತಾಲೂಕಿನ ಕೃಷ್ಣಾಪುರದ ಶ್ರೀ ಮಠದ ಸ್ವಾಮೀಜಿ ನಿರಾಹಾರ ಮೌನ ಅನುಷ್ಠಾನದ ನಂತರ ಗುಹೆಯಿಂದ ಹೊರ ಬಂದಿದ್ದಾರೆ.
ಕೃಷ್ಣಾಪುರ ತಾಂಡಾದಲ್ಲಿರೋ ಬಂಜಾರಾ ಗುರು ಪೀಠದ ಕುಮಾರ ಮಹಾರಾಜ ಸ್ವಾಮೀಜಿ ತಮ್ಮದೇ ಮಠದ ಗುಹೆಯಲ್ಲಿ 62 ದಿನಗಳಿಂದ(ಎರಡು ತಿಂಗಳು) ಅನುಷ್ಠಾನಕ್ಕೆ , ಗಾಳಿ ಹಾಗೂ ಬೆಳಕು ಬಾರದ ಗುಹೆಯಲ್ಲಿ ದೀಪ ಹಚ್ಚಿಕೊಂಡು ಸ್ವಾಮೀಜಿ ಕುಳಿತಿದ್ದರು ಎನ್ನಲಾಗಿದೆ.
ಗಾಳಿ, ಬೆಳಕು ಬಾರದ ಗುಹೆಯಲ್ಲಿ ದೀಪ ಹಚ್ಚಿಕೊಂಡು ಕುಳಿತಿದ್ದ ಸ್ವಾಮೀಜಿ ಇಂದು ಹೊರಬಂದ ಹಿನ್ನೆಲೆ ಭಾಜಾ, ಭಜಂತ್ರಿಗಳ ಮೂಲಕ ಅವರನ್ನ ಭಕ್ತರು ಸ್ವಾಗತಿಸಿದ್ದಾರೆ.
English summary :Haveri