ವಾಚ್ ಮ್ಯಾನ್ ಆಗದಿರುವ ಜಮೀರ್ ಈಗ ಆಸ್ತಿ ಬರೆದುಕೊಡ್ತಾರಾ? ಆಸ್ತಿ ಅಕ್ರಮವಾಗಿದ್ದರೆ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುತ್ತದೆ: ಸಿ.ಟಿ ರವಿ ವ್ಯಂಗ್ಯ | Janata news
ಚಿಕ್ಕಮಗಳೂರು: : ಡ್ರಗ್ ಪ್ರಕರಣದಲ್ಲಿ ತನ್ನ ಹೆಸರು ಸಾಬೀತಾದರೆ ಸಂಪೂರ್ಣ ಆಸ್ತಿ ಸರ್ಕಾರಕ್ಕೆ ಬರೆದು ಕೊಡುವುದಾಗಿ ಜಮೀರ್ ಆಹಮ್ಮದ್ ಹೇಳಿದ್ದು, ಅವರು ಈ ಹಿಂದೆ ಯಡಿಯೂರಪ್ಪ ಸಿಎಂ ಆದರೆ ನಾನು ಅವರ ಮನೆ ಮುಂದೆ ವಾಚ್ ಮ್ಯಾನ್ ಆಗುತ್ತೇನಿ ಎಂದಿದ್ದರು. ಆದರೆ ಹೇಳಿದಂತೆ ವಾಚ್ ಮ್ಯಾನ್ ಆಗಿಲ್ಲ. ವಾಚ್ ಮ್ಯಾನ್ ಆಗದೇ ಇರುವವರು, ಆಸ್ತಿ ಬರೆದುಕೊಡುತ್ತಾರಾ? ಅವರ ಮಾತು ಯಾವುದನ್ನೂ ಗಂಭೀರವಾಗಿ ಪರಿಗಣಿಸಲು ಆಗುವುದಿಲ್ಲ ಎಂದು ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಅವರ ಆಸ್ತಿ ಅಕ್ರಮವಾಗಿದ್ದರೆ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅವರ ರಾಜಕೀಯ ಹೇಳಿಕೆಯನ್ನು ಜನರೇ ಗಂಭೀರವಾಗಿ ತೆಗೆದುಕೊಂಡಿಲ್ಲ. ನಿಜವಾಗಿಯೂ ಅವರ ಮಾತಿಗೆ ತಕ್ಕ ಹಾಗೇ ನಡೆದುಕೊಳ್ಳೋದಾದರೆ ಮೊದಲು ಹೇಳಿದ ರೀತಿಯಲ್ಲಿ ನಡೆದುಕೊಳ್ಳಲಿ. ತಕ್ಷಣ ಅವರು ಸಿಎಂ ಮನೆ ಮುಂದೆ ವಾಚ್ಮ್ಯಾನ್ ಆಗಲಿ ಎಂದು ಸಚಿವ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಅವರ ರಾಜಕೀಯ ಹೇಳಿಕೆ ಜನರೆ ಗಂಭೀರವಾಗಿ ತೆಗೆದುಕೊಂಡಿಲ್ಲ. ನಿಜವಾಗಿಯೂ ಅವರ ಮಾತಿಗೆ ತಕ್ಕ ಹಾಗೇ ನಡೆದುಕೊಳ್ಳುದಾದರೆ ಮೊದಲು ಹೇಳಿದ ರೀತಿಯಲ್ಲಿ ನಡೆದುಕೊಳ್ಳಲಿ ಎಂದರು.
ಡ್ರಗ್ ಮಾಫಿಯಾ ಅಕ್ರಮ ಚಟುವಟಿಕೆ ತನಿಖೆ ಗಂಭೀರವಾಗಿ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿಯಿದ್ದರೆ ಪೊಲೀಸರಿಗೆ ನೀಡಿ. ಮೊದಲೆಲ್ಲಾ ಎಲ್ಲಿ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ ಎನ್ನುವ ಭಯದಿಂದ ಮಾಹಿತಿ ನೀಡುತ್ತಿರಲಿಲ್ಲ. ಈ ಬಗ್ಗೆ ತನಿಖೆ ಗಂಭೀರವಾಗಿ ನಡೆಯುತ್ತಿದೆ. ಡ್ರಗ್ ಮಾಫಿಯಾವನ್ನ ಬೇರು ಸಹಿತ ಕಿತ್ತು ಹಾಕಬೇಕು ಅಂತಾ ತನಿಖೆ ಗಂಭೀರವಾಗಿ ನಡೆಸುತ್ತಿದ್ದೇವೆ. ಪ್ರಶಾಂತ್ ಸಂಬರಗಿ ಮಾತ್ರವಲ್ಲ, ಇನ್ನು ಯಾರ್ಯಾರಿಗೆ ಮಾಹಿತಿ ಇದೆಯೋ ಅವರು ಮಾಹಿತಿಯನ್ನು ಪೊಲೀಸರಿಗೆ ನೀಡಿ ಎಂದಿದ್ದಾರೆ.